ಕಳೆದ ವರ್ಷ ಮಳೆ ಕೊರತೆಯಿಂದ ಸಮುದ್ರದಾಳದಲ್ಲಿ ಪೋಷಕಾಂಶಗಳ ಕೊರತೆಯಾಗಿರುವ ಸಾಧ್ಯತೆಗಳು ಹೆಚ್ಚಾಗಿವೆ. ಜತೆಗೆ ಹವಾಮಾನ ವೈಪರೀತ್ಯವೂ ಮೀನಿನ ಇಳುವರಿ ಕುಸಿತಕ್ಕೆ ಕಾರಣ ಎಂದು ಹೇಳಬಹುದು.
ಆರ್. ವಿವೇಕ್, ಮೀನುಗಾರಿಕಾ ಇಲಾಖೆ ಜಂಟಿ ನಿರ್ದೇಶಕ
ಮಲ್ಪೆ ಬಂದರಿನಲ್ಲಿ ಅರ್ಧದಷ್ಟು ಬೋಟ್ಗಳು ನಿಂತಿವೆ. ಸಮುದ್ರಕ್ಕಿಳಿದರೆ ಹಾಕಿದ ಬಂಡವಾಳ ಕೈಸೇರುತ್ತದೆ ಎಂಬ ಗ್ಯಾರಂಟಿ ಇಲ್ಲದಂತಾಗಿದೆ. ಬೋಟ್ ಇಳಿಸಿ ನಷ್ಟ ಅನುಭವಿಸುವ ಬದಲು ಸ್ವಲ್ಪದಿನ ಕೈಕಟ್ಟಿ ಕೂರುವುದು ಒಳಿತು ಎಂಬ ನಿರ್ಧಾರಕ್ಕೆ ಮೀನುಗಾರರು ಬಂದಿದ್ದಾರೆ.