ಚತುರ್ಮುಖ ಬಸದಿ ಸಂಪರ್ಕಿಸುವ ರಸ್ತೆ ನಿರ್ಮಾಣಕ್ಕೆ ಸ್ಥಳಬಿಟ್ಟು ಕೊಟ್ಟ 5 ಮಂದಿ ದಾನಿಗಳನ್ನು ಗೌರವಿಸಲಾಯಿತು. ವರಂಗ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಜ್ಯೋತಿ ಹರೀಶ್, ಹೆಬ್ರಿ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ರಮೇಶ್ ಕುಮಾರ್, ವರಂಗ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶ್ರುತಿ ಆದರ್ಶ ಶೆಟ್ಟಿ, ಶಶಿಧರ್, ಸಂತೋಷ್, ರತ್ನ ಪೂಜಾರಿ, ಲೀಲಾವತಿ, ಅಪ್ಪಿ ಸೇರಿಗಾರ್ತಿ ಇದ್ದರು. ಸುರೇಂದ್ರ ಸ್ವಾಗತಿಸಿದರು. ಸುಹಾಸ್ ಶೆಟ್ಟಿ ಮುಟ್ಲುಪಾಡಿ ನಿರೂಪಿಸಿ ವಂದಿಸಿದರು.