ಉಡುಪಿ: ಬಡವರು ಹಾಗೂ ನಿರ್ಗತಿಕರನ್ನು ಆಸ್ಪತ್ರೆಗಳಿಗೆ ಉಚಿತವಾಗಿ ಕರೆದೊಯ್ಯಲು ಹಲವು ಕಾರು ಮಾಲೀಕರು ಮುಂದೆ ಬಂದಿದ್ದು, ಸಾರಿಗೆ ಇಲಾಖೆಯಿಂದ ವಾಹನಗಳ ಸಂಚಾರಕ್ಕೆ ಅನುಮತಿ ಪತ್ರ ನೀಡಲಾಯಿತು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಜೆ.ಪಿ.ಗಂಗಾಧರ್ ತಿಳಿಸಿದ್ದಾರೆ.
‘ಉಚಿತ ಆರೋಗ್ಯ ಸೇವೆ-ಸ್ವಯಂ ಸೇವಕ ಚಾಲಕ’ ಎಂಬ ಘೋಷವಾಕ್ಯದೊಂದಿಗೆ 9 ಮಂದಿ ಚಾಲಕರು ವೈದ್ಯಕೀಯ ತುರ್ತು ನೆರವಿಗೆ ಉಚಿತವಾಗಿ ಕಾರುಗಳ ಸೇವೆ ನೀಡಲು ಮುಂದೆ ಬಂದಿದ್ದಾರೆ. ರೋಗಿಗಳನ್ನು ಆಸ್ಪತ್ರೆಗೆ ಕೊಂಡೊಯ್ಯುವ ಹಾಗೂ ನಿವಾಸಕ್ಕೆ ಕರೆದೊಯ್ಯುವ ಕಾರ್ಯ ಮಾಡಲಿದ್ದಾರೆ.
ಜಿಲ್ಲಾಧಿಕಾರಿ ಅವರಿಂದಲೂ ಅನುಮತಿ ಪಡೆದಿದ್ದು, ಉಚಿತಸೇವೆ ಅಗತ್ಯವಿದ್ದವರು ದೀಪಕ್ ಕೋಟ್ಯಾನ್: 9632893328, ಅಬ್ದುಲ್ ಲತೀಫ್: 9008300900 ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.