ಉಡುಪಿ: ಗಾಂಧೀಜಿ ಭಾರತ ದೇಶಕ್ಕೆ ಸೀಮಿತವಾಗಿರದೆ, ಇಡೀ ಜಗತ್ತಿಗೆ ಪ್ರೇರಣ ಶಕ್ತಿಯಾಗಿದ್ದಾರೆ. ಅವರು ತನ್ನ ವಿಚಾರಧಾರೆಗಳಿಂದ ಇಂದಿಗೂ ಪ್ರಚಲಿತದಲ್ಲಿದ್ದಾರೆ. ಆದರೆ ನಾವು ಗಾಂಧಿಯನ್ನು ಸ್ವಚ್ಛತೆಯ ಚಿಹ್ನೆಯಾಗಿ ಮಾತ್ರ ಬಳಸಿಕೊಂಡಿದ್ದೇವೆಯೇ ಹೊರತು, ಅವರ ರಾಮರಾಜ್ಯದ ಪರಿಕಲ್ಪನೆಯನ್ನು ಅನುಷ್ಠಾನಗೊಳಿಸಿಲ್ಲ ಎಂದು ಮಣಿಪಾಲ ಮಾಹೆಯ ಎಂಐಸಿಯ ಸಹಾಯಕ ಪ್ರಾಧ್ಯಾಪಕ ಪ್ರೊ. ಶ್ರೀರಾಜ್ ಗುಡಿ ಬೇಸರ ವ್ಯಕ್ತಪಡಿಸಿದರು.