ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ ರೈಲು ನಿಲ್ದಾಣದಲ್ಲಿ ಚಂಡಿಘಡ ಬಾಲಕಿಯ ರಕ್ಷಣೆ

Last Updated 28 ಸೆಪ್ಟೆಂಬರ್ 2021, 16:00 IST
ಅಕ್ಷರ ಗಾತ್ರ

ಉಡುಪಿ: ಚಂಡಿಘಡದಿಂದ ನಾಪತ್ತೆಯಾಗಿದ್ದ 16 ವರ್ಷದ ಬಾಲಕಿಯನ್ನು ಮಂಗಳವಾರ ಉಡುಪಿ ರೈಲು ನಿಲ್ದಾಣದಲ್ಲಿ ರೈಲ್ವೆ ಸುರಕ್ಷತಾ ಪಡೆಯ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ.

ಚಂಡಿಘಡದಲ್ಲಿ ಬಾಲಕಿ ಅಪಹರಣಕ್ಕೊಳಗಿರುವ ದೂರು ದಾಖಲಾಗಿದ್ದು, ಅಲ್ಲಿನ ಪೊಲೀಸರು ಫೋನ್ ಮೂಲಕ ಸಂಪರ್ಕಿಸಿ ಬಾಲಕಿಯ ಪತ್ತೆಗೆ ನೆರವು ಕೋರಿದ್ದರು. ಅದರಂತೆ, ಎಎಸ್‌ಐಪಿಎಫ್‌ ಸುಧೀರ್ ಶೆಟ್ಟಿ ಅವರ ತಂಡ ಪ್ಲಾಟ್‌ಫಾರಂನಲ್ಲಿ ಶೋಧ ಕಾರ್ಯ ನಡೆಸಿದಾಗ ಪ್ರಮುಖ ದ್ವಾರದಲ್ಲಿ ಬಾಲಕಿ ಹಾಗೂ 26 ವರ್ಷದ ಯುವಕನೊಬ್ಬ ಸಿಕ್ಕಿಬಿದ್ದ.

ನಂತರ ಬಾಲಕಿಯನ್ನು ವಿಚಾರಿಸಿದಾಗ 10 ದಿನಗಳ ಹಿಂದೆ ಪೋಷಕರಿಗೆ ತಿಳಿಸದೆ ಮನೆಬಿಟ್ಟು ಬಂದಿರುವುದಾಗಿ ತಿಳಿಸಿದರು. ಆಕೆಯ ಜತೆಗಿದ್ದ ಯುವಕ ಉತ್ತರ ಪ್ರದೇಶದ ಕೊಟ್ವಾಲಿಯ ಮಹಮ್ಮದ್ ಸಾಧಿಕ್ ಎಂದು ತಿಳಿದುಬಂತು. ಕೂಡಲೇ ಚಂಡಿಘಡ ಪೊಲೀಸರಿಗೆ ವಿಷಯ ತಿಳಿಸಿ ಇಬ್ಬರನ್ನು ಅವರ ವಶಕ್ಕೆ ಒಪ್ಪಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT