ನಂತರ ನಡೆದ ‘ಹಚ್ಚೇವು ಕನ್ನಡದ ದೀಪ’ ರಾಜ್ಯೋತ್ಸವ ಸರಣಿ ಕಾರ್ಯಕ್ರಮದಲ್ಲಿ ಮಂಗಳೂರಿನ ಕರ್ಣಾಟಕ ಯಕ್ಷಧಾಮದ ಸಂಚಾಲಕ ಹಾಗೂ ಕಲಾಸಂಘಟಕ ಎಚ್.ಜನಾರ್ದನ ಹಂದೆ ಮಾತನಾಡಿ, ‘ಕನ್ನಡ ಮಾತೆಂದರೆ ಸಿಹಿಯಾದ ಹೋಳಿಗೆಯನ್ನು ಸವಿದಂತೆ. ಕಲೆ, ಸಾಹಿತ್ಯ, ಸಂಗೀತ ಮುಂತಾದ ಕನ್ನಡ ಕಾರ್ಯಕ್ರಮಗಳು ಹೀಗೆಯೇ ನಿರಂತರವಾಗಿ ನಡೆಯಲಿ. ಕನ್ನಡ ಮನಸ್ಸುಗಳಿಗೆ ನಿತ್ಯ ರಸದೌತಣವನ್ನು ಉಣಬಡಿಸಲಿ’ ಎಂದರು.