<p><strong>ಉಡುಪಿ</strong>: ಭಾರತೀಯ ಸಮಕಾಲೀನ ರಂಗಭೂಮಿ ಇತಿಹಾಸದಲ್ಲಿ ಸದಾನಂದ ಸುವರ್ಣರು ಪ್ರತಿನಾಯಕನಾಗಿ ನಿಲ್ಲುತ್ತಾರೆ. ಅದನ್ನು ಅರ್ಥಮಾಡಿಕೊಳ್ಳಲು ಅವರ ಕೋರ್ಟ್ ಮಾರ್ಶನ್ ನಾಟಕವೇ ಸಾಕ್ಷಿ ಎಂದು ರಂಗನಿರ್ದೇಶಕ ಪ್ರಸನ್ನ ಹೇಳಿದರು.</p>.<p>ಉಡುಪಿ ರಂಗಭೂಮಿ ಹಾಗೂ ಉಡುಪಿಯ ವಿವಿಧ ರಂಗ ತಂಡಗಳ ಸಹಭಾಗಿತ್ವದಲ್ಲಿ ನಗರದ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ರಂಗ ದಿಗ್ಗಜ ಸದಾನಂದ ಸುವರ್ಣರಿಗೆ ನಮನ ಮತ್ತು ಆಷಾಢದಲೊಂದು ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಸದಾನಂದ ಸುವರ್ಣರು ಮುಂಬೈನ ಜೆ.ಜೆ. ಸ್ಕೂಲ್ ಆಫ್ ಆರ್ಟ್ಸ್ ಮೂಲಕ ರಂಗಭೂಮಿಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡವರು. ಸಮಕಾಲೀನ ರಂಗನಟನೆಯಲ್ಲಿ ಭಾರತೀಯ ಪರಂಪರೆಯನ್ನು ರೂಪಿಸಿದವರಲ್ಲಿ ಅವರು ಮುಂಚೂಣಿಯಲ್ಲಿ ನಿಲ್ಲುತ್ತಾರೆ ಎಂದರು.</p>.<p>ಇಂದು ಯಾವ ರಾಜಕಾರಣಿಗಳು ಕೂಡ ನಾಟಕವನ್ನು ನೋಡುವುದಿಲ್ಲ. ಈ ಅದ್ಭುತ ಕ್ಷೇತ್ರವನ್ನು ಅವರೆಲ್ಲ ಕಡೆಗಣಿಸುತ್ತಿದ್ದಾರೆ. ರಾಜಕಾರಣಿಗಳನ್ನು ನಾವು ಮೂರ್ಖರ ರೀತಿಯಲ್ಲಿ ನಂಬಿ ಜಗಳ ಆಡುತ್ತಿದ್ದೇವೆ. ಈ ದುರಂತ ಸ್ಥಿತಿಗೆ ಭಾರತ ದೇಶ ಬಂದು ಬಿದ್ದಿದೆ ಎಂದು ಹೇಳಿದರು.</p>.<p>ಸಾಕ್ಷ್ಯಚಿತ್ರ ನಿರ್ದೇಶಕ ನಟೇಶ್ ಉಲ್ಲಾಳ್ ನುಡಿನಮನ ಸಲ್ಲಿಸಿದರು. ರಂಗಕರ್ಮಿ ಕೆ.ಎಂ.ರಾಘವ ನಂಬಿಯಾರ್ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕಿ ಸುಧಾ ಅಡುಕಳ ಮಾತನಾಡಿದರು.</p>.<p>ಉದ್ಯಾವರ ನಾಗೇಶ್ ಕುಮಾರ್, ಮುರಳಿ ಕಡೆಕಾರ್, ಭಾಸ್ಕರ ರಾವ್ ಕಿದಿಯೂರು, ಸಂತೋಷ್ ಕುಮಾರ್ ಪಟ್ಲ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ</strong>: ಭಾರತೀಯ ಸಮಕಾಲೀನ ರಂಗಭೂಮಿ ಇತಿಹಾಸದಲ್ಲಿ ಸದಾನಂದ ಸುವರ್ಣರು ಪ್ರತಿನಾಯಕನಾಗಿ ನಿಲ್ಲುತ್ತಾರೆ. ಅದನ್ನು ಅರ್ಥಮಾಡಿಕೊಳ್ಳಲು ಅವರ ಕೋರ್ಟ್ ಮಾರ್ಶನ್ ನಾಟಕವೇ ಸಾಕ್ಷಿ ಎಂದು ರಂಗನಿರ್ದೇಶಕ ಪ್ರಸನ್ನ ಹೇಳಿದರು.</p>.<p>ಉಡುಪಿ ರಂಗಭೂಮಿ ಹಾಗೂ ಉಡುಪಿಯ ವಿವಿಧ ರಂಗ ತಂಡಗಳ ಸಹಭಾಗಿತ್ವದಲ್ಲಿ ನಗರದ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ರಂಗ ದಿಗ್ಗಜ ಸದಾನಂದ ಸುವರ್ಣರಿಗೆ ನಮನ ಮತ್ತು ಆಷಾಢದಲೊಂದು ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಸದಾನಂದ ಸುವರ್ಣರು ಮುಂಬೈನ ಜೆ.ಜೆ. ಸ್ಕೂಲ್ ಆಫ್ ಆರ್ಟ್ಸ್ ಮೂಲಕ ರಂಗಭೂಮಿಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡವರು. ಸಮಕಾಲೀನ ರಂಗನಟನೆಯಲ್ಲಿ ಭಾರತೀಯ ಪರಂಪರೆಯನ್ನು ರೂಪಿಸಿದವರಲ್ಲಿ ಅವರು ಮುಂಚೂಣಿಯಲ್ಲಿ ನಿಲ್ಲುತ್ತಾರೆ ಎಂದರು.</p>.<p>ಇಂದು ಯಾವ ರಾಜಕಾರಣಿಗಳು ಕೂಡ ನಾಟಕವನ್ನು ನೋಡುವುದಿಲ್ಲ. ಈ ಅದ್ಭುತ ಕ್ಷೇತ್ರವನ್ನು ಅವರೆಲ್ಲ ಕಡೆಗಣಿಸುತ್ತಿದ್ದಾರೆ. ರಾಜಕಾರಣಿಗಳನ್ನು ನಾವು ಮೂರ್ಖರ ರೀತಿಯಲ್ಲಿ ನಂಬಿ ಜಗಳ ಆಡುತ್ತಿದ್ದೇವೆ. ಈ ದುರಂತ ಸ್ಥಿತಿಗೆ ಭಾರತ ದೇಶ ಬಂದು ಬಿದ್ದಿದೆ ಎಂದು ಹೇಳಿದರು.</p>.<p>ಸಾಕ್ಷ್ಯಚಿತ್ರ ನಿರ್ದೇಶಕ ನಟೇಶ್ ಉಲ್ಲಾಳ್ ನುಡಿನಮನ ಸಲ್ಲಿಸಿದರು. ರಂಗಕರ್ಮಿ ಕೆ.ಎಂ.ರಾಘವ ನಂಬಿಯಾರ್ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕಿ ಸುಧಾ ಅಡುಕಳ ಮಾತನಾಡಿದರು.</p>.<p>ಉದ್ಯಾವರ ನಾಗೇಶ್ ಕುಮಾರ್, ಮುರಳಿ ಕಡೆಕಾರ್, ಭಾಸ್ಕರ ರಾವ್ ಕಿದಿಯೂರು, ಸಂತೋಷ್ ಕುಮಾರ್ ಪಟ್ಲ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>