<p><strong>ಕುಂದಾಪುರ:</strong> ಕಲಾಕ್ಷೇತ್ರ ಕುಂದಾಪುರ ಬೋರ್ಡ್ ಹೈಸ್ಕೂಲ್ ಆವರಣದಲ್ಲಿ ಭಾನುವಾರ ಸಂಜೆ ಆಯೋಜಿಸಿದ ಕನ್ನಡದ ಹಳೆ ಚಲನಚಿತ್ರದ ಹಾಡುಗಳ ‘ಇನಿದನಿ’ ಸಂಗೀತ ರಸಮಂಜರಿ ಕಾರ್ಯಕ್ರಮ ಶೋತೃಗಳ ಮನಸೂರೆಗೊಂಡಿತು.</p>.<p>ಗಾಯಕರಾದ ಬೆಂಗಳೂರಿನ ಅಜಯ್ ವಾರಿಯರ್, ಮೋಹನಕೃಷ್ಣ, ಶಶಿಕಲಾ ಸುನಿಲ್, ಮಂಗಳೂರಿನ ವೈ.ಎನ್. ರವೀಂದ್ರ, ಮಾಲಿನಿ ಕೇಶವ ಪ್ರಸಾದ್ ಅಶೋಕ್ ಸಾರಂಗ್, ಸ್ಥಳೀಯ ಪ್ರತಿಭೆಗಳಾದ ಧಾರಿಣಿ ಕುಂದಾಪುರ, ಪ್ರಾಪ್ತಿ ಹೆಗ್ಡೆ, ಕಮಲ್ ಗಾಯನದ ಮೂಲಕ ಸಂಗೀತ ಪ್ರೇಮಿಗಳನ್ನು ರಂಜಿಸಿದರು.</p>.<p>ಹಿನ್ನೆಲೆ ಸಂಗೀತದಲ್ಲಿ ರಾಜಗೋಪಾಲ್ ಮೂಡುಬಿದಿರೆ, ರಾಜೇಶ್ ಭಾಗವತ್, ಭಾಸ್ಕರ ಕುಂಬ್ಳೆ, ಗಣೇಶ್ ನವಗಿರಿ, ವಾಮನ ಕುಮಾರ್ ಕಾರ್ಕಳ, ಸಿಜಿಮೂನ್ ಕೊಚ್ಚಿನ್, ಗುರುರಾಜ್ ಎಂ.ಜಿ, ಸುಮುಖ್ ಆಚಾರ್ಯ, ವರ್ಷಾ ಕುಂದಾಪುರ, ಟೋನಿ ಡಿಸಿಲ್ವ ಸಹಕರಿಸಿದರು. ಕೆ.ವಿ. ರಮಣ್ ಮೂಡುಬಿದಿರೆ ಕಾರ್ಯಕ್ರಮ ನಿರೂಪಿಸಿದರು.</p>.<p>ಪ್ರಾಸ್ತಾವಿಕವಾಗಿ ಮಾತನಾಡಿದ ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ಅಧ್ಯಕ್ಷ ಬಿ. ಕಿಶೋರ್ ಕುಮಾರ್, ‘ಈ ಬಾರಿ 14ನೇ ವರ್ಷದ ಕಾರ್ಯಕ್ರಮ ನಡೆಯುತ್ತಿದ್ದು, 90ರ ದಶಕದೊಳಗಿನ, ಅತ್ಯುತ್ತಮ ಸಂಗೀತ ಸಂಯೋಜನೆ ಇರುವ ಹಾಡುಗಳನ್ನು ಗಾಯಕರು ಪ್ರಸ್ತುತಿಪಡಿಸುವರು’ ಎಂದರು.</p>.<p>ಮುಖಂಡ ಕೆ. ಜಯಪ್ರಕಾಶ್ ಹೆಗ್ಡೆ, ಟ್ರಸ್ಟ್ ಕಾರ್ಯದರ್ಶಿ ರಾಮಚಂದ್ರ ಬಿ.ಎನ್, ಟ್ರಸ್ಟಿಗಳಾದ ದಾಮೋದರ್ ಪೈ, ಜೋಯ್ ಜೆ. ಕರ್ವೆಲ್ಲೊ, ಉದಯ್ ಕುಮಾರ್ ಶೆಟ್ಟಿ ಪಡುಕೆರೆ, ಮಂಜುನಾಥ ಶೆಟ್ಟಿ ದೊಡ್ಮನೆ, ಡಾ.ರಾಜಾರಾಮ್ ಶೆಟ್ಟಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಂದಾಪುರ:</strong> ಕಲಾಕ್ಷೇತ್ರ ಕುಂದಾಪುರ ಬೋರ್ಡ್ ಹೈಸ್ಕೂಲ್ ಆವರಣದಲ್ಲಿ ಭಾನುವಾರ ಸಂಜೆ ಆಯೋಜಿಸಿದ ಕನ್ನಡದ ಹಳೆ ಚಲನಚಿತ್ರದ ಹಾಡುಗಳ ‘ಇನಿದನಿ’ ಸಂಗೀತ ರಸಮಂಜರಿ ಕಾರ್ಯಕ್ರಮ ಶೋತೃಗಳ ಮನಸೂರೆಗೊಂಡಿತು.</p>.<p>ಗಾಯಕರಾದ ಬೆಂಗಳೂರಿನ ಅಜಯ್ ವಾರಿಯರ್, ಮೋಹನಕೃಷ್ಣ, ಶಶಿಕಲಾ ಸುನಿಲ್, ಮಂಗಳೂರಿನ ವೈ.ಎನ್. ರವೀಂದ್ರ, ಮಾಲಿನಿ ಕೇಶವ ಪ್ರಸಾದ್ ಅಶೋಕ್ ಸಾರಂಗ್, ಸ್ಥಳೀಯ ಪ್ರತಿಭೆಗಳಾದ ಧಾರಿಣಿ ಕುಂದಾಪುರ, ಪ್ರಾಪ್ತಿ ಹೆಗ್ಡೆ, ಕಮಲ್ ಗಾಯನದ ಮೂಲಕ ಸಂಗೀತ ಪ್ರೇಮಿಗಳನ್ನು ರಂಜಿಸಿದರು.</p>.<p>ಹಿನ್ನೆಲೆ ಸಂಗೀತದಲ್ಲಿ ರಾಜಗೋಪಾಲ್ ಮೂಡುಬಿದಿರೆ, ರಾಜೇಶ್ ಭಾಗವತ್, ಭಾಸ್ಕರ ಕುಂಬ್ಳೆ, ಗಣೇಶ್ ನವಗಿರಿ, ವಾಮನ ಕುಮಾರ್ ಕಾರ್ಕಳ, ಸಿಜಿಮೂನ್ ಕೊಚ್ಚಿನ್, ಗುರುರಾಜ್ ಎಂ.ಜಿ, ಸುಮುಖ್ ಆಚಾರ್ಯ, ವರ್ಷಾ ಕುಂದಾಪುರ, ಟೋನಿ ಡಿಸಿಲ್ವ ಸಹಕರಿಸಿದರು. ಕೆ.ವಿ. ರಮಣ್ ಮೂಡುಬಿದಿರೆ ಕಾರ್ಯಕ್ರಮ ನಿರೂಪಿಸಿದರು.</p>.<p>ಪ್ರಾಸ್ತಾವಿಕವಾಗಿ ಮಾತನಾಡಿದ ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ಅಧ್ಯಕ್ಷ ಬಿ. ಕಿಶೋರ್ ಕುಮಾರ್, ‘ಈ ಬಾರಿ 14ನೇ ವರ್ಷದ ಕಾರ್ಯಕ್ರಮ ನಡೆಯುತ್ತಿದ್ದು, 90ರ ದಶಕದೊಳಗಿನ, ಅತ್ಯುತ್ತಮ ಸಂಗೀತ ಸಂಯೋಜನೆ ಇರುವ ಹಾಡುಗಳನ್ನು ಗಾಯಕರು ಪ್ರಸ್ತುತಿಪಡಿಸುವರು’ ಎಂದರು.</p>.<p>ಮುಖಂಡ ಕೆ. ಜಯಪ್ರಕಾಶ್ ಹೆಗ್ಡೆ, ಟ್ರಸ್ಟ್ ಕಾರ್ಯದರ್ಶಿ ರಾಮಚಂದ್ರ ಬಿ.ಎನ್, ಟ್ರಸ್ಟಿಗಳಾದ ದಾಮೋದರ್ ಪೈ, ಜೋಯ್ ಜೆ. ಕರ್ವೆಲ್ಲೊ, ಉದಯ್ ಕುಮಾರ್ ಶೆಟ್ಟಿ ಪಡುಕೆರೆ, ಮಂಜುನಾಥ ಶೆಟ್ಟಿ ದೊಡ್ಮನೆ, ಡಾ.ರಾಜಾರಾಮ್ ಶೆಟ್ಟಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>