ಕಾರ್ಕಳ: ಇಲ್ಲಿನ ಆನೆಕೆರೆ ಚತುರ್ಮುಖ ಕೆರೆಬಸದಿಯ ಪಂಚಕಲ್ಯಾಣ ಮಹೋತ್ಸವ ಹಾಗೂ ಶಿರ್ಲಾಲು ಸೂಡಿ ಬಸದಿಯ ಕಲ್ಯಾಣ ಮಹೋತ್ಸವದಲ್ಲಿ ಮಾರ್ಗದರ್ಶನ ನೀಡುವ ಮುನಿಗಳ ಪುರಪ್ರವೇಶ ಭಾನುವಾರ ನಡೆಯಿತು.
ಮುನಿಗಳಾದ ಅಮೋಘಕೀರ್ತಿ ಮಹಾರಾಜ್, ಅಮರಕೀರ್ತಿ ಮಹಾರಾಜ್ ಅವರನ್ನು ಜೈನ ಸಮುದಾಯದ ಪ್ರಮುಖರು, ಶ್ರಾವಿಕ, ಶ್ರಾವಿಕೆಯರು ಜೋಡುಕಟ್ಟೆ ಸಮೀಪ ಸಕಲ ಮಂಗಳ ವಾದ್ಯ ಪುರಸ್ಸರವಾಗಿ ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಂಡರು.