ಜಾರ್ಕಳ ಮೂಲದ ವ್ಯಕ್ತಿಯೊಬ್ಬರು ರಟ್ಟು ಪ್ಲಾಸ್ಟಿಕ್ ಇತರೆ ತ್ಯಾಜ್ಯಗಳನ್ನು ಎಸೆದಿರುವುದನ್ನು ನೀರೆ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಅಂಕಿತಾ ನಾಯಕ್ ಬೆಳಿಗ್ಗೆ ಕರ್ತವ್ಯಕ್ಕೆ ಬರುತ್ತಿದ್ದಾಗ ಗಮನಿಸಿದರು. ಆ ವ್ಯಕ್ತಿಯನ್ನು ಹಿಂಬಾಲಿಸಿಕೊಂಡು ಹೋದ ಪಿಡಿಒ ಘಟನಾ ಸ್ಥಳಕ್ಕೆ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಗಣೇಶ್ ಅವರನ್ನು ಬರುವಂತೆ ತಿಳಿಸಿದರು.ಕಸ ಎಸೆದಾತನಿಗೆ ಸ್ಥಳದಲ್ಲೇ ₹500 ದಂಡ ವಿಧಿಸಿ, ನಂತರ ಕಸ ಎಸೆದ ಅದೇ ವ್ಯಕ್ತಿಯಿಂದ ತೆಗೆಸಿ ಪಂಚಾಯಿತಿಯ ಎಸ್.ಎಲ್.ಆರ್.ಎಂ ವಾಹನಕ್ಕೆ ಹಾಕಲು ಸೂಚಿಸಿದರು.