ಕಾರ್ಕಳ: ಮಂಗಳೂರಿನಿಂದ ಶೃಂಗೇರಿ ಕ್ಷೇತ್ರಕ್ಕೆ ತೆರಳುತ್ತಿದ್ದ ತೆಲಂಗಾಣ ಶಾಸಕ ಪಂಜುಗುಳಿ ರೋಹಿತ್ ರೆಡ್ಡಿ ಅವರ ಜೀಪ್ಗೆ ದನ ಅಡ್ಡಬಂದಿದ್ದರಿಂದ ಜೀಪು ಮರಕ್ಕೆ ಡಿಕ್ಕಿಯಾದ ಘಟನೆ ತಾಲ್ಲೂಕಿನ ಮಿಯ್ಯಾರು ಸೇತುವೆ ಸಮೀಪ ಮುಡಾರು- ನಲ್ಲೂರು ಕ್ರಾಸ್ನಲ್ಲಿ ಸಂಭವಿಸಿದೆ.
ಚಾಲಕನ ಸಮಯ ಪ್ರಜ್ಞೆಯಿಂದ ವಾಹನದಲ್ಲಿದ್ದ ಶಾಸಕರಿಗೆ ಗಾಯಗಳಾಗಿಲ್ಲ. ರಸ್ತೆ ಬದಿಯ ವಿದ್ಯುತ್ ಕಂಬ ಹಾಗೂ ಮರವೊಂದರ ನಡುವೆ ಸಿಲುಕಿದ ಜೀಪು ಜಖಂಗೊಂಡಿದೆ. ನಂತರ ಕಾರ್ಕಳ ಪೊಲೀಸರ ಸಹಕಾರದಲ್ಲಿ ಶಾಸಕರು ಪ್ರತ್ಯೇಕ ವಾಹನದಲ್ಲಿ ಶೃಂಗೇರಿ ಕಡೆಗೆ ಪ್ರಯಾಣಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.