ಉಡುಪಿ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕಯಾಕಿಂಗ್ ತಂಡದ ಸದಸ್ಯರು ಸೀತಾ ನದಿಯ ಮಧ್ಯದಲ್ಲಿ ಧ್ವಜನೆಟ್ಟು ಸುತ್ತಲೂ ಕಯಾಕಿಂಗ್ ದೋಣಿಗಳನ್ನು ನಿಲ್ಲಿಸಿ ವಿಭಿನ್ನವಾಗಿ ಸ್ವಾತಂತ್ರ್ಯೋತ್ಸವ ಆಚರಿಸಿದರು.
ಊರಿನ ಹಿರಿಯ ಗುರಿಕಾರರಾದ ಕೂಸ ಮರಕಾಲ ಧ್ವಜಾರೋಹಣ ಮಾಡಿದರು. ಅನ್ನ ನೀಡುತ್ತಿರುವ ಪ್ರಕೃತಿಯ ಮಧ್ಯೆ ರಾಷ್ಟ್ರಪ್ರೇಮವನ್ನು ಉತ್ತೇಜಿಸುವ ಪ್ರಯತ್ನವಾಗಿ ಸೀತಾ ನದಿಯ ಮಧ್ಯೆ ರಾಷ್ಟ್ರ ಧ್ವಜ ಹಾರಿಸಿದ್ದೇವೆ ಎಂದು ತಂಡದ ಸದಸ್ಯ ಮಿಥುನ್ ತಿಳಿಸಿದರು.