ಅಮೃತಭಾರತಿ ವಿದ್ಯಾಲಯದ ಟ್ರಸ್ಟ್ ಅಧ್ಯಕ್ಷ ಶೈಲೇಶ್ ಕಿಣಿ ನೇತೃತ್ವ ವಹಿಸಿದ್ದರು. ಟ್ರಸ್ಟ್ ಸದಸ್ಯರಾದ ಗುರುದಾಸ ಶೆಣೈ, ಬಾಲಕೃಷ್ಣ ಮಲ್ಯ, ರಾಮಕೃಷ್ಣ ಆಚಾರ್ಯ, ಶಾಲಾ ಮುಖ್ಯ ಶಿಕ್ಷಕಿ ಅಪರ್ಣಾ ಆಚಾರ್, ಶಕುಂತಲಾ, ಮಾಸ ಪತ್ರಿಕಾ ಸಂಪಾದಕ ಮಹೇಶ್ ಹೈಕಾಡಿ ಉಪಸ್ಥಿತರಿದ್ದರು. ವಿದ್ವಾನ್ ವೇದವ್ಯಾಸ ತಂತ್ರಿ ಸ್ವಾಗತಿಸಿ, ಸುನಿಲ್ ನಾಯಕ್ ವಂದಿಸಿ ಸಾವಿತ್ರಿ ಕಿಣಿ ನಿರೂಪಿಸಿದರು.