<p><strong>ಉಡುಪಿ:</strong> ಗನ್ ಜತೆ ರೊಮಾನ್ಸ್ ಮಾಡುವ ಮಾವೋವಾದಿಗಳು ಹಾಗೂ ನಕ್ಸಲರಿಗೆ ದೇಶದ ಅಭಿವೃದ್ಧಿ ಬಗ್ಗೆ ಯಾವುದೇ ಬದ್ಧತೆ ಇಲ್ಲ ಎಂದು ಕೇಂದ್ರ ಮಾನವ ಸಂಪನ್ಮೂಲ ಖಾತೆ ರಾಜ್ಯ ಸಚಿವ ಡಾ.ಸತ್ಯಪಾಲ್ ಸಿಂಗ್ ವಾಗ್ದಾಳಿ ನಡೆಸಿದರು.</p>.<p>ಗುರುವಾರ ಮಣಿಪಾಲದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಮ್ಮದು ನಕ್ಸಲ್ವಾದಕ್ಕೆ ವಿರುದ್ಧವಾಗಿರುವ ಅಭಿವೃದ್ಧಿಯ ವಾದ. ನಕ್ಸಲೀಯರು ಮುಗ್ಧ ಜನರ ತಲೆ ಕೆಡಿಸಿ, ಮಾವೋ ಸಿದ್ಧಾಂತಗಳನ್ನು ಹಬ್ಬಿಸಿ ಹಿಂಸೆಯನ್ನು ಹೆಚ್ಚಿಸುತ್ತಿದ್ದಾರೆ. ಧನಾತ್ಮಕವಾದ ಅಭಿವೃದ್ಧಿಯ ಪರವಾಗಿ ನಕ್ಸಲರು ಮುಖ್ಯವಾಹಿನಿಗೆ ಬರಬೇಕು. ಅದಕ್ಕೆ ಸ್ವಾಗತವಿದೆ ಎಂದು ಹೇಳಿದರು.</p>.<p>ಉತ್ತರ ಪ್ರದೇಶದಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯ ಗಂಗಾನದಿ ಶುದ್ಧೀಕರಣ ಕಾರ್ಯ ಭರದಿಂದ ಸಾಗಿದೆ. ಮುಂದಿನ ಜನವರಿಯೊಳಗೆ ಯೋಜನೆ ಶೇ 80ರಷ್ಟು ಪೂರ್ಣವಾಗಲಿದೆ. ಶೀಘ್ರವೇ ಗಂಗೆ ಶುದ್ಧವಾಗಲಿದೆ ಎಂದರು.</p>.<p>ಫೆಬ್ರವರಿಯಲ್ಲಿ ಕುಂಭಮೇಳ ನಡೆಯುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಂತೆ ಗಂಗಾ ನೈರ್ಮಲ್ಯಕ್ಕೆ ಗಂಗಾನದಿ ಹರಿಯುವ ಇತರ ರಾಜ್ಯಗಳ ಮುಖ್ಯಮಂತ್ರಿಗಳೂ ಬದ್ಧತೆ ತೋರಿಸಬೇಕು. ಯೋಜನೆಗೆ ಹಣಕಾಸು ಸಮಸ್ಯೆ ಇಲ್ಲ. ಅಗತ್ಯ ಅನುದಾನ ನೀಡಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ:</strong> ಗನ್ ಜತೆ ರೊಮಾನ್ಸ್ ಮಾಡುವ ಮಾವೋವಾದಿಗಳು ಹಾಗೂ ನಕ್ಸಲರಿಗೆ ದೇಶದ ಅಭಿವೃದ್ಧಿ ಬಗ್ಗೆ ಯಾವುದೇ ಬದ್ಧತೆ ಇಲ್ಲ ಎಂದು ಕೇಂದ್ರ ಮಾನವ ಸಂಪನ್ಮೂಲ ಖಾತೆ ರಾಜ್ಯ ಸಚಿವ ಡಾ.ಸತ್ಯಪಾಲ್ ಸಿಂಗ್ ವಾಗ್ದಾಳಿ ನಡೆಸಿದರು.</p>.<p>ಗುರುವಾರ ಮಣಿಪಾಲದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಮ್ಮದು ನಕ್ಸಲ್ವಾದಕ್ಕೆ ವಿರುದ್ಧವಾಗಿರುವ ಅಭಿವೃದ್ಧಿಯ ವಾದ. ನಕ್ಸಲೀಯರು ಮುಗ್ಧ ಜನರ ತಲೆ ಕೆಡಿಸಿ, ಮಾವೋ ಸಿದ್ಧಾಂತಗಳನ್ನು ಹಬ್ಬಿಸಿ ಹಿಂಸೆಯನ್ನು ಹೆಚ್ಚಿಸುತ್ತಿದ್ದಾರೆ. ಧನಾತ್ಮಕವಾದ ಅಭಿವೃದ್ಧಿಯ ಪರವಾಗಿ ನಕ್ಸಲರು ಮುಖ್ಯವಾಹಿನಿಗೆ ಬರಬೇಕು. ಅದಕ್ಕೆ ಸ್ವಾಗತವಿದೆ ಎಂದು ಹೇಳಿದರು.</p>.<p>ಉತ್ತರ ಪ್ರದೇಶದಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯ ಗಂಗಾನದಿ ಶುದ್ಧೀಕರಣ ಕಾರ್ಯ ಭರದಿಂದ ಸಾಗಿದೆ. ಮುಂದಿನ ಜನವರಿಯೊಳಗೆ ಯೋಜನೆ ಶೇ 80ರಷ್ಟು ಪೂರ್ಣವಾಗಲಿದೆ. ಶೀಘ್ರವೇ ಗಂಗೆ ಶುದ್ಧವಾಗಲಿದೆ ಎಂದರು.</p>.<p>ಫೆಬ್ರವರಿಯಲ್ಲಿ ಕುಂಭಮೇಳ ನಡೆಯುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಂತೆ ಗಂಗಾ ನೈರ್ಮಲ್ಯಕ್ಕೆ ಗಂಗಾನದಿ ಹರಿಯುವ ಇತರ ರಾಜ್ಯಗಳ ಮುಖ್ಯಮಂತ್ರಿಗಳೂ ಬದ್ಧತೆ ತೋರಿಸಬೇಕು. ಯೋಜನೆಗೆ ಹಣಕಾಸು ಸಮಸ್ಯೆ ಇಲ್ಲ. ಅಗತ್ಯ ಅನುದಾನ ನೀಡಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>