<p><strong>ಉಡುಪಿ: </strong>ಎಂಜಿಎಂ ಕಾಲೇಜಿನ ಮುದ್ದಣ್ಣ ಮಂಟಪದಲ್ಲಿ ಸೋಮವಾರ ಸಂಜೆ ನೃತ್ಯ ನಿಕೇತನ ಕೊಡವೂರು ತಂಡ ಪ್ರದರ್ಶಿಸಿದ ‘ನಾರಸಿಂಹ’ ನೃತ್ಯ ರೂಪಕ ನೆರೆದಿದ್ದವರ ಕಣ್ಮನ ಸೆಳೆಯಿತು.</p>.<p>ವರಾಹ ಅವತಾರದಲ್ಲಿ ಬರುವ ವಿಷ್ಣು ಹಿರಣ್ಯಾಕ್ಷನ ವಧಿಸುವ ಪ್ರಸಂಗ, ಉಗ್ರ ನರಸಿಂಹನ ಅವತಾರ, ಹಿರಣ್ಯಕ ಶಿಪುವಿನ ಸಂಹಾರ, ಹೀಗೆ ನಾರಸಿಂಹ ರೂಪಕದ ಹಲವು ಪ್ರಸಂಗಳು ಮನೋಜ್ಞವಾಗಿ ಮೂಡಿಬಂದವು.</p>.<p>ಪ್ರತಿಯೊಂದು ಸನ್ನಿವೇಶವನ್ನೂ ಕಲಾವಿದರು ಅಚ್ಚುಕಟ್ಟಾಗಿ ತೆರೆಯ ಮೇಲೆ ಪ್ರಸ್ತುತ ಪಡಿಸಿದರು. ವಿದುಷಿ, ಮಾನಸಿ ಸುಧೀರ್, ವಿದುಷಿ ಅನಘಶ್ರೀ ನೃತ್ಯ ಸಾಂಗತ್ಯ ಅದ್ಭುತವಾಗಿತ್ತು. ವಿದ್ವಾನ್ ಸುಧೀರ್ ರಾವ್ ಕೊಡವೂರ ಅವರ ಪ್ರದರ್ಶನ ಗಮನ ಸೆಳೆಯಿತು.</p>.<p>ಪ್ರಯೋಗ ಅನಾವರಣ ಮಾಡಿ ಮಾತನಾಡಿದ ಆಳ್ವಾಸ್ ಎಜುಕೇಷನ್ ಫೌಂಡೇಷನ್ ಅಧ್ಯಕ್ಷ ಡಾ.ಮೋಹನ್ ಆಳ್ವ ‘ಭರತನಾಟ್ಯವನ್ನು ಕೇಂದ್ರವಾಗಿಟ್ಟುಕೊಂಡು ಶಾಸ್ತ್ರೀಯ ನೃತ್ಯದ ಎಲ್ಲ ಪ್ರಾಕಾರಗಳ ಬೆಳವಣಿಗೆಗೆ ಶ್ರಮಿಸುತ್ತಿರುವ ನೃತ್ಯ ನಿಕೇತನ ಕೊಡವೂರು ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.</p>.<p>ಸಾಂಸ್ಕೃತಿಕ ಕ್ಷೇತ್ರದಲ್ಲಿ ಸೃಜನ ಶೀಲತೆ ನಿರಂತರವಾಗಿರಬೇಕು. ಹೊಸ ಆವಿಷ್ಕಾರಗಳು ಮೂಡಿಬರಬೇಕು. ಕಲ್ಪನೆ, ಸೃಷ್ಟಿ, ಯೋಜನೆ, ವಿಶಾಲವಾದ ಮನೋಧರ್ಮಗಳು ಸಾಂಸ್ಕೃತಿಕ ಲೋಕದ ಸಂಪತ್ತಿದ್ದಂತೆ. ಮೂಲತನಕ್ಕೆ ತೊಂದರೆಯಾಗದಂತೆ ಹೊಸ ಪ್ರಯೋಗಗಳು ನಡೆಬೇಕಿದೆ ಎಂದರು.</p>.<p>ನೃತ್ಯನಿಕೇತನ ಕೊಡವೂರು ಸಂಸ್ಥೆ 30 ವರ್ಷಗಳಿಂದ ನಿರಂತರ ಕಲಾಸೇವೆಯಲ್ಲಿ ತೊಡಗಿದೆ. ಸಂಸ್ಥೆಯ ಕಾರ್ಯ ನಿರಂತರವಾಗಿ ಮುಂದುವರಿಯಲಿ.ಸಂಸ್ಥೆಯ ಕಾರ್ಯಕ್ರಮಗಳಿಗೆ ಆಳ್ವಾಸ್ನ ವೇದಿಕೆ ಒದಗಿಸಲಿದೆ ಎಂದು ಮೋಹನ್ ಆಳ್ವ ಆಶಿಸಿದರು.</p>.<p>ನಾರಸಿಂಹ ನೃತ್ಯ ರೂಪಕದ ರಚನೆಯನ್ನು ಸುಧಾ ಆಡುಕಳ ನಿರ್ವಹಿಸಿದರೆ, ವಿನ್ಯಾಸ, ಸಂಗೀತ ನಿರ್ದೇಶನ ಡಾ.ಶ್ರೀಪಾದ್ ಭಟ್, ರಂಗಸಜ್ಜಿಕೆ ವಸ್ತ್ರವಿನ್ಯಾಸ ರಾಜು ಮಣಿಪಾಲ, ಪ್ರಶಾಂತ ಉದ್ಯಾವರ, ಗೋಪಿನಾಥ್ ಆಚಾರ್ಯ, ವಿದ್ವಾನ್ ಸುಧೀರ್ ರಾವ್ ಕೊಡವೂರುಸಂಚಾಲಕರಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ: </strong>ಎಂಜಿಎಂ ಕಾಲೇಜಿನ ಮುದ್ದಣ್ಣ ಮಂಟಪದಲ್ಲಿ ಸೋಮವಾರ ಸಂಜೆ ನೃತ್ಯ ನಿಕೇತನ ಕೊಡವೂರು ತಂಡ ಪ್ರದರ್ಶಿಸಿದ ‘ನಾರಸಿಂಹ’ ನೃತ್ಯ ರೂಪಕ ನೆರೆದಿದ್ದವರ ಕಣ್ಮನ ಸೆಳೆಯಿತು.</p>.<p>ವರಾಹ ಅವತಾರದಲ್ಲಿ ಬರುವ ವಿಷ್ಣು ಹಿರಣ್ಯಾಕ್ಷನ ವಧಿಸುವ ಪ್ರಸಂಗ, ಉಗ್ರ ನರಸಿಂಹನ ಅವತಾರ, ಹಿರಣ್ಯಕ ಶಿಪುವಿನ ಸಂಹಾರ, ಹೀಗೆ ನಾರಸಿಂಹ ರೂಪಕದ ಹಲವು ಪ್ರಸಂಗಳು ಮನೋಜ್ಞವಾಗಿ ಮೂಡಿಬಂದವು.</p>.<p>ಪ್ರತಿಯೊಂದು ಸನ್ನಿವೇಶವನ್ನೂ ಕಲಾವಿದರು ಅಚ್ಚುಕಟ್ಟಾಗಿ ತೆರೆಯ ಮೇಲೆ ಪ್ರಸ್ತುತ ಪಡಿಸಿದರು. ವಿದುಷಿ, ಮಾನಸಿ ಸುಧೀರ್, ವಿದುಷಿ ಅನಘಶ್ರೀ ನೃತ್ಯ ಸಾಂಗತ್ಯ ಅದ್ಭುತವಾಗಿತ್ತು. ವಿದ್ವಾನ್ ಸುಧೀರ್ ರಾವ್ ಕೊಡವೂರ ಅವರ ಪ್ರದರ್ಶನ ಗಮನ ಸೆಳೆಯಿತು.</p>.<p>ಪ್ರಯೋಗ ಅನಾವರಣ ಮಾಡಿ ಮಾತನಾಡಿದ ಆಳ್ವಾಸ್ ಎಜುಕೇಷನ್ ಫೌಂಡೇಷನ್ ಅಧ್ಯಕ್ಷ ಡಾ.ಮೋಹನ್ ಆಳ್ವ ‘ಭರತನಾಟ್ಯವನ್ನು ಕೇಂದ್ರವಾಗಿಟ್ಟುಕೊಂಡು ಶಾಸ್ತ್ರೀಯ ನೃತ್ಯದ ಎಲ್ಲ ಪ್ರಾಕಾರಗಳ ಬೆಳವಣಿಗೆಗೆ ಶ್ರಮಿಸುತ್ತಿರುವ ನೃತ್ಯ ನಿಕೇತನ ಕೊಡವೂರು ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.</p>.<p>ಸಾಂಸ್ಕೃತಿಕ ಕ್ಷೇತ್ರದಲ್ಲಿ ಸೃಜನ ಶೀಲತೆ ನಿರಂತರವಾಗಿರಬೇಕು. ಹೊಸ ಆವಿಷ್ಕಾರಗಳು ಮೂಡಿಬರಬೇಕು. ಕಲ್ಪನೆ, ಸೃಷ್ಟಿ, ಯೋಜನೆ, ವಿಶಾಲವಾದ ಮನೋಧರ್ಮಗಳು ಸಾಂಸ್ಕೃತಿಕ ಲೋಕದ ಸಂಪತ್ತಿದ್ದಂತೆ. ಮೂಲತನಕ್ಕೆ ತೊಂದರೆಯಾಗದಂತೆ ಹೊಸ ಪ್ರಯೋಗಗಳು ನಡೆಬೇಕಿದೆ ಎಂದರು.</p>.<p>ನೃತ್ಯನಿಕೇತನ ಕೊಡವೂರು ಸಂಸ್ಥೆ 30 ವರ್ಷಗಳಿಂದ ನಿರಂತರ ಕಲಾಸೇವೆಯಲ್ಲಿ ತೊಡಗಿದೆ. ಸಂಸ್ಥೆಯ ಕಾರ್ಯ ನಿರಂತರವಾಗಿ ಮುಂದುವರಿಯಲಿ.ಸಂಸ್ಥೆಯ ಕಾರ್ಯಕ್ರಮಗಳಿಗೆ ಆಳ್ವಾಸ್ನ ವೇದಿಕೆ ಒದಗಿಸಲಿದೆ ಎಂದು ಮೋಹನ್ ಆಳ್ವ ಆಶಿಸಿದರು.</p>.<p>ನಾರಸಿಂಹ ನೃತ್ಯ ರೂಪಕದ ರಚನೆಯನ್ನು ಸುಧಾ ಆಡುಕಳ ನಿರ್ವಹಿಸಿದರೆ, ವಿನ್ಯಾಸ, ಸಂಗೀತ ನಿರ್ದೇಶನ ಡಾ.ಶ್ರೀಪಾದ್ ಭಟ್, ರಂಗಸಜ್ಜಿಕೆ ವಸ್ತ್ರವಿನ್ಯಾಸ ರಾಜು ಮಣಿಪಾಲ, ಪ್ರಶಾಂತ ಉದ್ಯಾವರ, ಗೋಪಿನಾಥ್ ಆಚಾರ್ಯ, ವಿದ್ವಾನ್ ಸುಧೀರ್ ರಾವ್ ಕೊಡವೂರುಸಂಚಾಲಕರಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>