ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಯಾವ ಮಕ್ಕಳು ಅನುತ್ತೀರ್ಣರಾಗದಂತೆ ಎಚ್ಚರವಹಿಸಿ, ಮಗುವಿನ ವೈಯಕ್ತಿಕ ಕಡತದಲ್ಲಿ ಕಲಿಕೆಯ ಮಾಹಿತಿ, ಮಾರ್ಗದರ್ಶನ ಇರಲಿ. ಮಗುವಿನ ಕಲಿಕಾ ಮಾಹಿತಿ ಪೋಷಕರಿಗೆ ತಿಳಿಸಬೇಕು. ಶಿಕ್ಷಕ ವೃತ್ತಿಯನ್ನು ಸಮಾಜ ಸೇವೆಯಂತೆ ಪರಿಗಣಿಸಿ, ವಿದ್ಯಾರ್ಥಿಯ ಸರ್ವತೋಮುಖ ಅಭಿವೃದ್ಧಿಗೆ ಶಕ್ತಿಮೀರಿ ಶ್ರಮವಹಿಸಿ ಎಂದು ಸೂಚನೆ ನೀಡಿದರು.