<figcaption>""</figcaption>.<p><strong>ಉಡುಪಿ:</strong> ಆಕಸ್ಮಿಕವಾಗಿ ಬಾವಿಗೆ ಬಿದ್ದು, ಅಸಹಾಯಕ ಸ್ಥಿತಿಯಲ್ಲಿದ್ದ ವೃದ್ಧೆಯನ್ನು ರಕ್ಷಿಸಿದ ಉಡುಪಿ ನಗರ ಠಾಣೆ ಪಿಎಸ್ಐ (ಅಪರಾಧ) ಸದಾಶಿವ ಆರ್. ಗವರೋಜಿ ಅವರ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.</p>.<p>ಕುಕ್ಕಿಕಟ್ಟೆಯ ಮಾರ್ಪಳ್ಳಿಯಲ್ಲಿ ಗುರುವಾರ ವೃದ್ಧೆ ಬಾವಿಗೆ ಬಿದ್ದಿರುವುದನ್ನು ಕಂಡ ಸ್ಥಳೀಯರು ಪೊಲೀಸ್ ಠಾಣೆಗೆ ಸುದ್ದಿ ಮುಟ್ಟಿಸಿದರು. ಸಮೀಪದಲ್ಲಿ ಗಸ್ತಿನಲ್ಲಿದ್ದ ಪಿಎಸ್ಐ ಸದಾಶಿವ ತಕ್ಷಣವೇ ಸ್ಥಳಕ್ಕೆ ದೌಡಾಯಿಸಿ ಬಂದು, ಖುದ್ದು ಬಾವಿಗಿಳಿದು ರಕ್ಷಣೆಗೆ ಮುಂದಾದರು.</p>.<p>ಅಗ್ನಿಶಾಮಕ ದಳದ ಸಿಬ್ಬಂದಿ ವಿನಾಯಕ್ ಹಾಗೂ ಆಟೊ ಚಾಲಕ ರಾಜೇಶ್ ನಾಯಕ್ ರಕ್ಷಣಾ ಕಾರ್ಯಕ್ಕೆ ಜೊತೆಯಾದರು. ಅಂತಿಮವಾಗಿ ವೃದ್ಧೆಯನ್ನು ಬಾವಿಯಿಂದ ಸುರಕ್ಷಿತವಾಗಿ ಮೇಲೆತ್ತಿ ರಕ್ಷಣೆ ಮಾಡಲಾಯಿತು. ರಕ್ಷಣಾ ಕಾರ್ಯಾಚರಣೆಯ ವಿಡಿಯೊ<br />ಜಾಲತಾಣಗಳಲ್ಲಿ ವೈರಲ್ ಆಗಿದೆ.</p>.<p>ಈ ಕುರಿತು ಮಾಹಿತಿ ನೀಡಿದ ಪಿಎಸ್ಐ ಸದಾಶಿವ, ‘ಕಾನೂನು ಸುವ್ಯವಸ್ಥೆ ಜತೆಗೆ ನಾಗರಿಕರ ರಕ್ಷಣೆ ಹೊಣೆಯೂ ಕರ್ತವ್ಯದ ಭಾಗವಾಗಿರುವುದರಿಂದ ವೃದ್ಧೆಯ ರಕ್ಷಣೆಗೆ ಬಾವಿಗಿಳಿಯಬೇಕಾಯಿತು. ಇದರಲ್ಲಿ ಹೆಚ್ಚುಗಾರಿಕೆ ಏನಿಲ್ಲ’ ಎಂದರು.</p>.<div style="text-align:center"><figcaption><em><strong>ಉಡುಪಿ ನಗರ ಠಾಣೆ ಪಿಎಸ್ಐ (ಅಪರಾಧ) ಸದಾಶಿವ ಆರ್.ಗವರೋಜಿ </strong></em></figcaption></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<figcaption>""</figcaption>.<p><strong>ಉಡುಪಿ:</strong> ಆಕಸ್ಮಿಕವಾಗಿ ಬಾವಿಗೆ ಬಿದ್ದು, ಅಸಹಾಯಕ ಸ್ಥಿತಿಯಲ್ಲಿದ್ದ ವೃದ್ಧೆಯನ್ನು ರಕ್ಷಿಸಿದ ಉಡುಪಿ ನಗರ ಠಾಣೆ ಪಿಎಸ್ಐ (ಅಪರಾಧ) ಸದಾಶಿವ ಆರ್. ಗವರೋಜಿ ಅವರ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.</p>.<p>ಕುಕ್ಕಿಕಟ್ಟೆಯ ಮಾರ್ಪಳ್ಳಿಯಲ್ಲಿ ಗುರುವಾರ ವೃದ್ಧೆ ಬಾವಿಗೆ ಬಿದ್ದಿರುವುದನ್ನು ಕಂಡ ಸ್ಥಳೀಯರು ಪೊಲೀಸ್ ಠಾಣೆಗೆ ಸುದ್ದಿ ಮುಟ್ಟಿಸಿದರು. ಸಮೀಪದಲ್ಲಿ ಗಸ್ತಿನಲ್ಲಿದ್ದ ಪಿಎಸ್ಐ ಸದಾಶಿವ ತಕ್ಷಣವೇ ಸ್ಥಳಕ್ಕೆ ದೌಡಾಯಿಸಿ ಬಂದು, ಖುದ್ದು ಬಾವಿಗಿಳಿದು ರಕ್ಷಣೆಗೆ ಮುಂದಾದರು.</p>.<p>ಅಗ್ನಿಶಾಮಕ ದಳದ ಸಿಬ್ಬಂದಿ ವಿನಾಯಕ್ ಹಾಗೂ ಆಟೊ ಚಾಲಕ ರಾಜೇಶ್ ನಾಯಕ್ ರಕ್ಷಣಾ ಕಾರ್ಯಕ್ಕೆ ಜೊತೆಯಾದರು. ಅಂತಿಮವಾಗಿ ವೃದ್ಧೆಯನ್ನು ಬಾವಿಯಿಂದ ಸುರಕ್ಷಿತವಾಗಿ ಮೇಲೆತ್ತಿ ರಕ್ಷಣೆ ಮಾಡಲಾಯಿತು. ರಕ್ಷಣಾ ಕಾರ್ಯಾಚರಣೆಯ ವಿಡಿಯೊ<br />ಜಾಲತಾಣಗಳಲ್ಲಿ ವೈರಲ್ ಆಗಿದೆ.</p>.<p>ಈ ಕುರಿತು ಮಾಹಿತಿ ನೀಡಿದ ಪಿಎಸ್ಐ ಸದಾಶಿವ, ‘ಕಾನೂನು ಸುವ್ಯವಸ್ಥೆ ಜತೆಗೆ ನಾಗರಿಕರ ರಕ್ಷಣೆ ಹೊಣೆಯೂ ಕರ್ತವ್ಯದ ಭಾಗವಾಗಿರುವುದರಿಂದ ವೃದ್ಧೆಯ ರಕ್ಷಣೆಗೆ ಬಾವಿಗಿಳಿಯಬೇಕಾಯಿತು. ಇದರಲ್ಲಿ ಹೆಚ್ಚುಗಾರಿಕೆ ಏನಿಲ್ಲ’ ಎಂದರು.</p>.<div style="text-align:center"><figcaption><em><strong>ಉಡುಪಿ ನಗರ ಠಾಣೆ ಪಿಎಸ್ಐ (ಅಪರಾಧ) ಸದಾಶಿವ ಆರ್.ಗವರೋಜಿ </strong></em></figcaption></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>