ಕರ್ತವ್ಯದಲ್ಲಿ ನಿರತರಾಗಿದ್ದ ಕಾರಣ ಎರಡೂವರೆ ತಿಂಗಳ ಕಾಲ ಮನೆಗೂ ಹೋಗದೆ, ಕುಟುಂಬದ ಸದಸ್ಯರನ್ನೂ ಭೇಟಿ ಮಾಡದೆ ಏಕಾಂಗಿಯಾಗಿ ಉಳಿದುಕೊಂಡಿದ್ದರು ಸುಮಿತ್. ಕೆಲವೊಮ್ಮೆ ದಿನಕ್ಕೆ ಐದಾರು ಶವಗಳ ಅಂತ್ಯಕ್ರಿಯೆ ನೆರವೇರಿಸಿದ್ದು ಉಂಟು. ಲಾಕ್ಡೌನ್ ಅವಧಿಯಲ್ಲಿ ಹೋಟೆಲ್ಗಳು ಮುಚ್ಚಿದ್ದರಿಂದ ಹಲವರು ಬಾರಿ ಊಟಕ್ಕೆ ಸಮಸ್ಯೆಯಾಗಿತ್ತು. ನಿರಂತರ ಕೆಲಸದ ಒತ್ತಡದಿಂದ ಮಾನಸಿಕವಾಗಿಯೂ ಒತ್ತಡಕ್ಕೆ ಸಿಲುಕಿದ್ದೆ. ವೈಯಕ್ತಿಕವಾಗಿ ಹಲವು ಸಮಸ್ಯೆಗಳನ್ನು ಎದುರಿಸಿದರೂ ಇಲಾಖೆ ವಹಿಸಿದ ಜವಾಬ್ದಾರಿಯನ್ನು ನಿಭಾಯಿಸಿದ ತೃಪ್ತಿ ಇದೆ ಎನ್ನುತ್ತಾರೆ ಸುಮಂತ್.