ಈ ಸಂಬಂಧ ಎನ್ಇಸಿಎಫ್ ಸಂಘಟನೆಯ ಶಶಿಧರ್ ಶೆಟ್ಟಿ ಮಾತನಾಡಿ, ಹೆಬ್ರಿ ಆರ್ಆಫ್ಎಫ್ ಆಗಿದ್ದ ಮನಿರಾಜು ಅರಣ್ಯ ಒತ್ತುವರಿ, ಮರಗಳ ಕಳ್ಳಸಾಗಾಟ, ಪ್ರಾಣಿ ಬೇಟೆಗೆ ಕಡಿವಾಣ ಹಾಕಿದ್ದರು. ಹಲವು ಅಕ್ರಮಗಳನ್ನು ಬಯಲಿಗೆಳೆದಿದ್ದರು. ಇಂತಹ ಅಧಿಕಾರಿಯನ್ನು ಒತ್ತಡಗಳಿಗೆ ಮಣಿದು ಏಕಾಏಕಿ ವರ್ಗಾವಣೆ ಮಾಡಿರುವುದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.