ಉಡುಪಿ: ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ ಸಂತೋಷ್ ಪಾಟೀಲರ ಮರಣೋತ್ತರ ಪರೀಕ್ಷೆ ನಡೆಯಿತು. ಬಳಿಕ ದೇಹವನ್ನು ಕುಟುಂಬಸ್ಥರು ಬೆಳಗಾವಿಯ ಹಿಂಡಲಗಾ ಗ್ರಾಮಕ್ಕೆ ಕೊಂಡೊಯ್ದರು.
‘ಎಸ್ಪಿ ಎನ್.ವಿಷ್ಣುವರ್ಧನ್ ಆರೋಪಿಗಳ ವಿರುದ್ಧ ಕಾನೂನು ಕ್ರಮದ ಭರವಸೆ ನೀಡಿರುವುದರಿಂದ ಶವ ಕೊಂಡೊಯ್ಯುತ್ತಿದ್ದು, ಮುಂದಿನ ಹೋರಾಟದ ಕುರಿತು ಕುಟುಂಬದ ಸದಸ್ಯರ ಜತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಸಂಬಂಧಿ ಪ್ರಶಾಂತ್ ಪಾಟೀಲ ತಿಳಿಸಿದರು.