ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರವಂತೆ: ಕಡಲ್ಕೊರೆತದ ಅಬ್ಬರ, ಮೀನುಗಾರರ ಮನೆಗಳಿಗೆ ಅಪಾಯ ಸಾಧ್ಯತೆ

Last Updated 12 ಮೇ 2021, 10:46 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆಯ ಬೈಂದೂರು ತಾಲ್ಲೂಕಿನ ಮರವಂತೆಯಲ್ಲಿ ಮಂಗಳವಾರ ರಾತ್ರಿಯಿಂದ ಕಡಲ್ಕೊರೆತ ಆರಂಭವಾಗಿದ್ದು, ಪರಿಣಾಮ ತೀವ್ರ ಹಾನಿ ಉಂಟಾಗಿದೆ. ಮೀನುಗಾರಿಕೆಯ ಹೊರ ಬೈಂದೂರಿನ ಉತ್ತರ ಬ್ರೇಕ್ ವಾಟರ್‌ನ ತೀರದಲ್ಲಿ ಕಡಲ್ಕೊರೆತ ಉಂಟಾಗಿದ್ದು, ಹಲವು ತೆಂಗಿನ ಮರ ಸಮುದ್ರದ ಪಾಲಾಗಿವೆ.

ರಭಸವಾದ ಅಲೆಗಳು ಅಪ್ಪಳಿಸಿದ ಪರಿಣಾಮ ಮೀನುಗಾರಿಕೆ ಶೆಡ್ ಕೂಡ ಕುಸಿದು ಬಿದ್ದಿದೆ. ಇನ್ನೊಂದು ಶೆಡ್‌ ಕೂಡ ಅಪಾಯದಲ್ಲಿದೆ.

ಇದೇ 14 ಮತ್ತು 15 ರಂದು ಚಂಡಮಾರುತದ ಮುನ್ಸೂಚನೆ ಮಾಹಿತಿ ಇದ್ದು, ಈ ಪ್ರದೇಶದ ಮೀನುಗಾರಿಕೆ, ರಸ್ತೆ, ಮೀನುಗಾರರ ಮನೆಗಳಿಗೆ ಅಪಾಯ ಉಂಟಾಗುವ ಸಾಧ್ಯತೆ ಇದೆ.

ಈಗಾಗಲೇ ಸ್ಥಳೀಯರು ಹಾನಿ ವಿಡಿಯೊಗಳನ್ನು ಉಡುಪಿ ಜಿಲ್ಲಾಧಿಕಾರಿ ಜಗದೀಶ್‌ ಹಾಗೂ ಸ್ಥಳೀಯ ಶಾಸಕ ಸುಕುಮಾರ್‌ ಶೆಟ್ಟಿ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಕಳುಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT