<p><strong>ಕಾರ್ಕಳ</strong>: ಇಲ್ಲಿನ ಬಿಎಸ್ಎನ್ಎಲ್ ವ್ಯಾಪ್ತಿಯ ಸೂಡ ದೂರವಾಣಿ ಕೇಂದ್ರದಲ್ಲಿ ಟೆಲಿಕಾಂ ಮೆಕ್ಯಾನಿಕ್ ಆಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿಯಾದ, ಬಳಕೆದಾರರ ಮೆಚ್ಚುಗೆ ಗಳಿಸಿದ್ದ ಶಿವರಾಮ ಸಫಲಿಗ ಅವರನ್ನು ಕಾರ್ಕಳ ದೂರವಾಣಿ ಮನೋರಂಜನಾ ಕೂಟದ ವತಿಯಿಂದ ಬೀಳ್ಕೊಡಲಾಯಿತು.</p>.<p>ಹಾಲಿ ಜೆ.ಟಿ.ಒ. ವಿನೀತ್ ಅವರು ಶಿವರಾಮ ಅವರ ಸೇವಾ ತತ್ವರತೆ, ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿದರು.</p>.<p>ಬಿಎಸ್ಎನ್ಎಲ್ ನೌಕರರ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ತನ್ವೀರ್ ಪಾಷಾ ಮಾತನಾಡಿ, ಶಿವರಾಮ ಅವರು ಸಂಘಟನೆಯ ವಿವಿಧ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಅವರ ನಡೆನುಡಿ ಇತರರಿಗೆ ಮಾದರಿ ಎಂದರು.</p>.<p>ಎಜಿಎಂ ಹರಿಕುಮಾರ್, ಗಫೂರ್, ಜಯರಾಮ ಎನ್, ಉಷಾ ಶಶಿಧರ್ ಭಾಗವಹಿಸಿದ್ದರು. ಕೂಟದ ಪರವಾಗಿ ಸಫಲಿಗ ದಂಪತಿಯನ್ನು ಸನ್ಮಾನಿಸಲಾಯಿತು.</p>.<p>ಶಿವರಾಮ ಸಫಲಿಗ ಅವರು ಬಿಎಸ್ಎನ್ಲ್ ಸಂಸ್ಥೆಯಲ್ಲಿ ಆರಂಭಿಕ ದಿನಗಳಲ್ಲಿ ಅನುಭವಿಸಿದ ಕಷ್ಟ ನಷ್ಟಗಳನ್ನು ಉಲ್ಲೇಖಿಸಿ ಸಹಕರಿಸಿದ ಎಲ್ಲರನ್ನು ಸ್ಮರಿಸಿದರು</p>.<p>ದೂರವಾಣಿ ಮನೋರಂಜನಾ ಕೂಟದ ಅಧ್ಯಕ್ಷ ಜೆ.ಟಿ.ಒ ಸುದರ್ಶನ್ ಅಧ್ಯಕ್ಷತೆ ವಹಿಸಿದ್ದರು. ಗುರುರಾಜ್ ನಿರೂಪಿಸಿದರು. ಸುಧೀರ್ ಶೆಟ್ಟಿ ಸಹಕರಿಸಿದರು. ಕೆ.ಕೆ. ನಂಬಿಯಾರ್ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರ್ಕಳ</strong>: ಇಲ್ಲಿನ ಬಿಎಸ್ಎನ್ಎಲ್ ವ್ಯಾಪ್ತಿಯ ಸೂಡ ದೂರವಾಣಿ ಕೇಂದ್ರದಲ್ಲಿ ಟೆಲಿಕಾಂ ಮೆಕ್ಯಾನಿಕ್ ಆಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿಯಾದ, ಬಳಕೆದಾರರ ಮೆಚ್ಚುಗೆ ಗಳಿಸಿದ್ದ ಶಿವರಾಮ ಸಫಲಿಗ ಅವರನ್ನು ಕಾರ್ಕಳ ದೂರವಾಣಿ ಮನೋರಂಜನಾ ಕೂಟದ ವತಿಯಿಂದ ಬೀಳ್ಕೊಡಲಾಯಿತು.</p>.<p>ಹಾಲಿ ಜೆ.ಟಿ.ಒ. ವಿನೀತ್ ಅವರು ಶಿವರಾಮ ಅವರ ಸೇವಾ ತತ್ವರತೆ, ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿದರು.</p>.<p>ಬಿಎಸ್ಎನ್ಎಲ್ ನೌಕರರ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ತನ್ವೀರ್ ಪಾಷಾ ಮಾತನಾಡಿ, ಶಿವರಾಮ ಅವರು ಸಂಘಟನೆಯ ವಿವಿಧ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಅವರ ನಡೆನುಡಿ ಇತರರಿಗೆ ಮಾದರಿ ಎಂದರು.</p>.<p>ಎಜಿಎಂ ಹರಿಕುಮಾರ್, ಗಫೂರ್, ಜಯರಾಮ ಎನ್, ಉಷಾ ಶಶಿಧರ್ ಭಾಗವಹಿಸಿದ್ದರು. ಕೂಟದ ಪರವಾಗಿ ಸಫಲಿಗ ದಂಪತಿಯನ್ನು ಸನ್ಮಾನಿಸಲಾಯಿತು.</p>.<p>ಶಿವರಾಮ ಸಫಲಿಗ ಅವರು ಬಿಎಸ್ಎನ್ಲ್ ಸಂಸ್ಥೆಯಲ್ಲಿ ಆರಂಭಿಕ ದಿನಗಳಲ್ಲಿ ಅನುಭವಿಸಿದ ಕಷ್ಟ ನಷ್ಟಗಳನ್ನು ಉಲ್ಲೇಖಿಸಿ ಸಹಕರಿಸಿದ ಎಲ್ಲರನ್ನು ಸ್ಮರಿಸಿದರು</p>.<p>ದೂರವಾಣಿ ಮನೋರಂಜನಾ ಕೂಟದ ಅಧ್ಯಕ್ಷ ಜೆ.ಟಿ.ಒ ಸುದರ್ಶನ್ ಅಧ್ಯಕ್ಷತೆ ವಹಿಸಿದ್ದರು. ಗುರುರಾಜ್ ನಿರೂಪಿಸಿದರು. ಸುಧೀರ್ ಶೆಟ್ಟಿ ಸಹಕರಿಸಿದರು. ಕೆ.ಕೆ. ನಂಬಿಯಾರ್ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>