18 ತಿಂಗಳ ಹಿಂದೆ ಮಣಿಪಾಲ ವಿವಿ ವಿದ್ಯಾರ್ಥಿಗಳು ನಿವೇಶನಕ್ಕೆ ಮೀಸಲಿಟ್ಟ ಜಾಗವನ್ನು ಸ್ವಚ್ಛಗೊಳಿಸಿದ್ದರು. ಆಗ ಮನೆಕಟ್ಟಲು ಜಾಗ ಯೋಗ್ಯವಾಗಿತ್ತು. ಆದರೆ, ಜಿಲ್ಲಾಡಳಿತಮೂಲಸೌಕರ್ಯ ಒದಗಿಸುವುದಾಗಿ ಹೇಳಿ ₹ 50 ಲಕ್ಷ ವ್ಯಯಿಸಿ ಮೂರು ಹಂತಗಳಲ್ಲಿ ಜಾಗವನ್ನು ಸಮತಟ್ಟು ಮಾಡಲು ಹೋಗಿ, ಗುಡ್ಡಗಳನ್ನು ನಿರ್ಮಿಸಿದೆ. ಪರಿಣಾಮ ಅವು ಕುಸಿಯುವ ಆತಂಕ ಎದುರಾಗಿದೆ. ಕಾಮಗಾರಿ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗಿದ್ದು ತನಿಖೆ ನಡೆಯುತ್ತಿದೆ ಎಂದರು.