ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿಯಲ್ಲಿ ಶ್ರೀಲಂಕಾ ವ್ಯಕ್ತಿ ಸಾವು: ಅಂತ್ಯ ಸಂಸ್ಕಾರ

Last Updated 27 ಫೆಬ್ರುವರಿ 2021, 16:56 IST
ಅಕ್ಷರ ಗಾತ್ರ

ಉಡುಪಿ: ಶ್ರೀಲಂಕಾದಿಂದ ಬಂದು ಉಡುಪಿಯಲ್ಲಿ ಈಚೆಗೆ ಮೃತಪಟ್ಟ ಕಬಿಲನ್‌ ನಟರಾಜನ್‌ ಎಂಬುವರ ಅಂತ್ಯಕ್ರಿಯೆ ಶುಕ್ರವಾರ ಬೀಡಿನಗುಡ್ಡೆಯ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು.

ಮೃತ ವ್ಯಕ್ತಿಯ ಶವವನ್ನು ಶ್ರೀಲಂಕಾಗೆ ಕೊಂಡೊಯ್ಯಲು ಕಾನೂನು ತೊಡಕು ಉಂಟಾಗಿದ್ದರಿಂದ ಸಾಮಾಜಿಕಕಾರ್ಯಕರ್ತರನೆರವುಪಡೆದುಉಡುಪಿಯಲ್ಲೇಅಂತ್ಯಕ್ರಿಯೆನಡೆಸಲಾಯಿತು.ಅಂತ್ಯಸಂಸ್ಕಾರದ ವಿಧಿವಿಧಾನಗಳನ್ನು ಆನ್‌ಲೈನ್‌ ಮೂಲಕ ಮೃತರ ಪತ್ನಿ, ಮಕ್ಕಳು ಹಾಗೂ ಕುಟುಂಬದ ಸದಸ್ಯರು ಶ್ರೀಲಂಕಾದಿಂದಲೇ ವೀಕ್ಷಿಸಿ ಕಂಬನಿ ಮಿಡಿದರು.

ವಿವರ:ನವೆಂಬರ್‌ನಲ್ಲಿ ಮೀನು ರಫ್ತು ಉದ್ಯಮ ನಡೆಸಲು ಶ್ರೀಲಂಕಾದಿಂದ ಉಡುಪಿಯ ಮಲ್ಪೆಗೆ ಬಂದಿದ್ದ ಕಬಿಲನ್‌ ನಟರಾಜನ್‌ಗೆ ಈಚೆಗೆ ಹೃದಯಾಘಾತ ಸಂಭವಿಸಿತ್ತು. ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಫೆ.17ರಂದು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರು. ಕೂಡಲೇ ಮೃತರ ಸಂಬಂಧಿಗಳಿಗೆ ಮರಣದ ಸುದ್ದಿ ಮುಟ್ಟಿಸಲಾಯಿತು.

ಶ್ರೀಲಂಕಾದಿಂದ ಮೃತ ವ್ಯಕ್ತಿಯ ಸಂಬಂಧಿಗಳು ಬಂದರೂ ಶವ ತೆಗೆದುಕೊಂಡು ಹೋಗಲು ಕಾನೂನಿನಡಿ ಸಮಸ್ಯೆ ಎದರಾಯಿತು. ಅಂತಿಮವಾಗಿ, ಉಡುಪಿಯಲ್ಲಿಯೇ ಶವ ಸಂಸ್ಕಾರ ನಡೆಸಲು ಮುಂದಾದಾಗ ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ಸುದರ್ಶನ್‌, ಹರ್ಷವರ್ಧನ್‌, ತಾರಾನಾಥ್ ಮೇಸ್ತ ಅವರು ಅಂತ್ಯಕ್ರಿಯೆಗೆ ಸಹಕಾರ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT