‘ಕಾರ್ಕಳ ಹೊರತಾದ ಕ್ಷೇತ್ರಕ್ಕೆ ಒತ್ತಾಯ’
ಕಾರ್ಕಳ ಹೊರತುಪಡಿಸಿ ರಾಜ್ಯದ ಯಾವುದಾದರೂ ಒಂದು ವಿಧಾನಸಭಾ ಕ್ಷೇತ್ರವನ್ನು ಮುತಾಲಿಕ್ ಅವರಿಗೆ ಬಿಟ್ಟುಕೊಡುವಂತೆ ಬಿಜೆಪಿ ನಾಯಕರು ಹಾಗೂ ಸಂಘ ಪರಿವಾರ ಮುಖಂಡರಿಗೆ ಮನವಿ ಮಾಡಿದರೆ ಖಂಡಿತ ಒಪ್ಪುವ ವಿಶ್ವಾಸವಿದೆ. ಮುತಾಲಿಕ್ ಅವರು ರಾಜಕೀಯ ನಿರ್ಧಾರವನ್ನು ಮರು ಪರಿಶೀಲಿಸಬೇಕು. ಕಾರ್ಕಳದಲ್ಲಿ ನಿಂತರೂ ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ ವಿರುದ್ಧ ಗೆಲ್ಲಲು ಸಾಧ್ಯವೇ ಇಲ್ಲ.
–ಮೋಹನ್ ಭಟ್, ಶ್ರೀರಾಮಸೇನೆ ಮಂಗಳೂರು ವಿಭಾಗ ಅಧ್ಯಕ್ಷ