ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಚೌಕಿದಾರನಂತೆ ದೇಶ ಕಾಯುವ ಕೆಲಸ ಮಾಡಿ

ನೂತನ ಸುತ್ತುಪೌಳಿ ಲೋಕಾರ್ಪಣೆಗೊಳಿಸಿ ಅದಮಾರು ಮಠದ ಶ್ರೀ
Last Updated 26 ಮಾರ್ಚ್ 2023, 7:15 IST
ಅಕ್ಷರ ಗಾತ್ರ

ಕೋಟ(ಬ್ರಹ್ಮಾವರ): ‘ಲೋಕಕ್ಕೆ ಕ್ಷೇಮ ದೊರೆಯಬೇಕಾದರೆ ಕಾವಲುಗಾರನಂತೆ ಹಗಲಿರುಳು ಕಾರ್ಯನಿರ್ವಹಿಸಬೇಕು. ಆಗ ನಾವು ನೆಮ್ಮದಿ, ಸಮೃದ್ಧಿಯಿಂದಿರಲು ಸಾಧ್ಯ’ ಎಂದು ಉಡುಪಿ ಅದಮಾರು ಮಠದ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಹೇಳಿದರು.

ಕೋಟದ ಹರ್ತಟ್ಟು ಕಲ್ಲಟ್ಟು ಮಹಾಲಿಂಗೇಶ್ವರ ದೇವಸ್ಥಾನದ ನೂತನ ಸುತ್ತುಪೌಳಿ ಲೋಕಾರ್ಪಣೆ, ಅಷ್ಟಬಂಧ ಪುನಃ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ದೇವಸ್ಥಾನದ ಗೌರವಾಧ್ಯಕ್ಷ ಆನಂದ್ ಸಿ. ಕುಂದರ್ ಕಾರ್ಯಕ್ರಮ ಉದ್ಘಾಟಿ ಸಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುರೇಶ್ ಗಾಣಿಗ ಅಧ್ಯಕ್ಷತೆ ವಹಿಸಿದ್ದರು.

ಜೀರ್ಣೋದ್ಧಾರಕ್ಕೆ ಸಹಕಾರ ನೀಡಿದ ದಾನಿಗಳಾದ ವಾಸುದೇವ ಮಯ್ಯ ಹರ್ತಟ್ಟು, ವಾಸುದೇವ ಮಯ್ಯ ಕಾಸನಗುಂದು, ಶ್ರೀನಿವಾಸ ಮಯ್ಯ ಹರ್ತಟ್ಟು, ಶ್ರೀನಿವಾಸ ಪೂಜಾರಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಘವೇಂದ್ರ ಶೆಟ್ಟಿ, ಇಂಜಿನಿಯರ್ ಮಿಥಿಲೇಶ್ ಆಚಾರ್ಯ, ಪೈಂಟರ್ ಸುರೇಶ್ ಸೇರಿಗಾರ್ ಅವರನ್ನು ಸನ್ಮಾನಿಸಲಾಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಅಜಿತ್ ದೇವಾಡಿಗ, ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಜಿ.ತಿಮ್ಮ ಪೂಜಾರಿ, ಮಣೂರು ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಸತೀಶ್ ಎಚ್. ಕುಂದರ್, ಕೋಟ ವಿರಾಡ್ವಿಶ್ಚ ಬ್ರಾಹ್ಮಣ ಸಮಾಜೋದ್ಧಾರಕ ಸಂಘದ ಅಧ್ಯಕ್ಷ ಎಂ. ಸುಬ್ರಾಯ ಆಚಾರ್ಯ, ಗುತ್ತಿಗೆದಾರ ಹೋಬಳಿಮನೆ ರಾಜು ಪೂಜಾರಿ, ಗ್ರಾ.ಪಂ. ಸದಸ್ಯರಾದ ಸುಧಾ ಎ. ಪೂಜಾರಿ, ಪಾಂಡು ಪೂಜಾರಿ, ಮಹಾಲಿಂಗೇಶ್ವರ ಸೇವಾ ಸಮಿತಿ ಅಧ್ಯಕ್ಷ ಶೇಖರ್ ದೇವಾಡಿಗ, ಜಿ. ಮಂಜುನಾಥ ಸೋಮಯಾಜಿ, ಕಲ್ಮಾಡಿ ಕೃಷ್ಣಮೂರ್ತಿ ಐತಾಳ್, ಹಂಡಿಕೆರೆಮೆನೆ ಸಂತೋಷ್ ಕುಮಾರ್ ಶೆಟ್ಟಿ, ಶನೀಶ್ವರ ದೇವಳದ ಧರ್ಮದರ್ಶಿ ಭಾಸ್ಕರ ಸ್ವಾಮಿ ಇದ್ದರು.

ಶಿಕ್ಷಕ ಸತೀಶ್ಚಂದ್ರ ಶೆಟ್ಟಿ, ದೀಪಿಕಾ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT