ಇಲ್ಲಿನ ಪೊಸ್ರಾಲ್ ಶಾಲೆಯ ಹತ್ತಿರ ನಿವಾಸಿ ಶಶಿಕಲಾ ಅವರು ಅಂಗನವಾಡಿ ಕಾರ್ಯಕರ್ತೆಯಾಗಿ ಕೆಲಸ ಮಾಡಿಕೊಂಡಿದ್ದು ಇವರಿಗೆ ವೇಣು ಗೋಪಾಲ ಎಂಬವರು ಬೆಂಗಳೂರಿನಲ್ಲಿ ಅಂಗನವಾಡಿಯ ಮೇಲ್ವಾಚಾರಕಿಯಾಗಿ ನೇಮಕಾತಿ ಮಾಡಿಸಿ ಕೊಡುವುದಾಗಿಯೂ ₹2ಲಕ್ಷ ಕೇಳಿದ್ದರು. ಅದರಂತೆ ಶಶಿಕಲಾ ಅವರು ಮುಂಡ್ಕೂರು ಗ್ರಾಮದ ಸಚ್ಚರೀಪೇಟೆ ಕೆನರಾ ಬ್ಯಾಂಕ್ನ ತನ್ನ ಖಾತೆಯಿಂದ ಕ್ರಮವಾಗಿ ನ. 16ರಂದು ₹80 ಸಾವಿರವನ್ನು ವೇಣುಗೋಪಾಲ ಅವರ ಅಣ್ಣ ವಿಶ್ವನಾಥ್ಗೆ, 24ರಂದು ₹1 ಲಕ್ಷ, 25ರಂದು ₹25 ಸಾವಿರ, ಡಿ. 2ರಂದು ₹55 ಸಾವಿರದ 3 ಅನ್ನು, ಡಿ.14 ರಂದು ₹10ಸಾವಿರ, 20ರಂದು ₹10ಸಾವಿರ ಹೀಗೇ 5 ಬಾರಿ ಒಟ್ಟು ₹2 ಲಕ್ಷದ 80ಸಾವಿರ ಹಣವನ್ನು ವೇಣುಗೋಪಾಲ ಅವರ ಬ್ಯಾಂಕ್ ಖಾತೆಗೆ ಕಳುಹಿಸಿದ್ದರು.