<p><strong>ಕಾರ್ಕಳ</strong>: ಬೆಂಗಳೂರಿನಲ್ಲಿ ಅಂಗನವಾಡಿಯ ಮೇಲ್ವಾಚಾರಕಿ ಹುದ್ದೆಗೆ ನೇಮಕಾತಿ ಮಾಡಿಸಿ ಕೊಡುವುದಾಗಿ ಹಣ ಪಡೆದು ವಂಚಿಸಿದ ಘಟನೆ ತಾಲ್ಲೂಕಿನ ಮುಂಡ್ಕೂರು ಗ್ರಾಮ ಸಚ್ಚರೀಪೇಟೆ ಎಂಬಲ್ಲಿ ನಡೆದಿದೆ.</p>.<p>ಇಲ್ಲಿನ ಪೊಸ್ರಾಲ್ ಶಾಲೆಯ ಹತ್ತಿರ ನಿವಾಸಿ ಶಶಿಕಲಾ ಅವರು ಅಂಗನವಾಡಿ ಕಾರ್ಯಕರ್ತೆಯಾಗಿ ಕೆಲಸ ಮಾಡಿಕೊಂಡಿದ್ದು ಇವರಿಗೆ ವೇಣು ಗೋಪಾಲ ಎಂಬವರು ಬೆಂಗಳೂರಿನಲ್ಲಿ ಅಂಗನವಾಡಿಯ ಮೇಲ್ವಾಚಾರಕಿಯಾಗಿ ನೇಮಕಾತಿ ಮಾಡಿಸಿ ಕೊಡುವುದಾಗಿಯೂ ₹2ಲಕ್ಷ ಕೇಳಿದ್ದರು. ಅದರಂತೆ ಶಶಿಕಲಾ ಅವರು ಮುಂಡ್ಕೂರು ಗ್ರಾಮದ ಸಚ್ಚರೀಪೇಟೆ ಕೆನರಾ ಬ್ಯಾಂಕ್ನ ತನ್ನ ಖಾತೆಯಿಂದ ಕ್ರಮವಾಗಿ ನ. 16ರಂದು ₹80 ಸಾವಿರವನ್ನು ವೇಣುಗೋಪಾಲ ಅವರ ಅಣ್ಣ ವಿಶ್ವನಾಥ್ಗೆ, 24ರಂದು ₹1 ಲಕ್ಷ, 25ರಂದು ₹25 ಸಾವಿರ, ಡಿ. 2ರಂದು ₹55 ಸಾವಿರದ 3 ಅನ್ನು, ಡಿ.14 ರಂದು ₹10ಸಾವಿರ, 20ರಂದು ₹10ಸಾವಿರ ಹೀಗೇ 5 ಬಾರಿ ಒಟ್ಟು ₹2 ಲಕ್ಷದ 80ಸಾವಿರ ಹಣವನ್ನು ವೇಣುಗೋಪಾಲ ಅವರ ಬ್ಯಾಂಕ್ ಖಾತೆಗೆ ಕಳುಹಿಸಿದ್ದರು.</p>.<p>ಇಷ್ಟಲ್ಲದೇ ಡಿ.23ರಂದು ವೇಣುಗೋಪಾಲ ಅವರು ಶಶಿಕಲಾ ಅವರ ಮನೆಗೆ ಬಂದು ರಸ್ತೆ ಅಪಘಾತದಲ್ಲಿ ಗಾಯಗೊಂಡ ತನ್ನ ಮಗಳ ಚಿಕಿತ್ಸೆಗಾಗಿ ಸಾಲ ರೂಪದಲ್ಲಿ ₹2.20ಲಕ್ಷವನ್ನು ಪಡೆದಿದ್ದರು. ಆದರೆ ಇದುವರೆಗೂ ಪಡೆದ ಹಣವನ್ನು ವಾಪಾಸು ನೀಡದೇ, ಹಣದ ಕುರಿತು ವಿಚಾರಿಸಿದ ಶಶಿಕಲಾ ಅವರ ಮೊಬೈಲ್ ಸಂಖ್ಯೆಯನ್ನು ಬ್ಲಾಕ್ ಮಾಡಿ ವಂಚಿಸುತ್ತಿದ್ದಾರೆ ಎಂದು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರ್ಕಳ</strong>: ಬೆಂಗಳೂರಿನಲ್ಲಿ ಅಂಗನವಾಡಿಯ ಮೇಲ್ವಾಚಾರಕಿ ಹುದ್ದೆಗೆ ನೇಮಕಾತಿ ಮಾಡಿಸಿ ಕೊಡುವುದಾಗಿ ಹಣ ಪಡೆದು ವಂಚಿಸಿದ ಘಟನೆ ತಾಲ್ಲೂಕಿನ ಮುಂಡ್ಕೂರು ಗ್ರಾಮ ಸಚ್ಚರೀಪೇಟೆ ಎಂಬಲ್ಲಿ ನಡೆದಿದೆ.</p>.<p>ಇಲ್ಲಿನ ಪೊಸ್ರಾಲ್ ಶಾಲೆಯ ಹತ್ತಿರ ನಿವಾಸಿ ಶಶಿಕಲಾ ಅವರು ಅಂಗನವಾಡಿ ಕಾರ್ಯಕರ್ತೆಯಾಗಿ ಕೆಲಸ ಮಾಡಿಕೊಂಡಿದ್ದು ಇವರಿಗೆ ವೇಣು ಗೋಪಾಲ ಎಂಬವರು ಬೆಂಗಳೂರಿನಲ್ಲಿ ಅಂಗನವಾಡಿಯ ಮೇಲ್ವಾಚಾರಕಿಯಾಗಿ ನೇಮಕಾತಿ ಮಾಡಿಸಿ ಕೊಡುವುದಾಗಿಯೂ ₹2ಲಕ್ಷ ಕೇಳಿದ್ದರು. ಅದರಂತೆ ಶಶಿಕಲಾ ಅವರು ಮುಂಡ್ಕೂರು ಗ್ರಾಮದ ಸಚ್ಚರೀಪೇಟೆ ಕೆನರಾ ಬ್ಯಾಂಕ್ನ ತನ್ನ ಖಾತೆಯಿಂದ ಕ್ರಮವಾಗಿ ನ. 16ರಂದು ₹80 ಸಾವಿರವನ್ನು ವೇಣುಗೋಪಾಲ ಅವರ ಅಣ್ಣ ವಿಶ್ವನಾಥ್ಗೆ, 24ರಂದು ₹1 ಲಕ್ಷ, 25ರಂದು ₹25 ಸಾವಿರ, ಡಿ. 2ರಂದು ₹55 ಸಾವಿರದ 3 ಅನ್ನು, ಡಿ.14 ರಂದು ₹10ಸಾವಿರ, 20ರಂದು ₹10ಸಾವಿರ ಹೀಗೇ 5 ಬಾರಿ ಒಟ್ಟು ₹2 ಲಕ್ಷದ 80ಸಾವಿರ ಹಣವನ್ನು ವೇಣುಗೋಪಾಲ ಅವರ ಬ್ಯಾಂಕ್ ಖಾತೆಗೆ ಕಳುಹಿಸಿದ್ದರು.</p>.<p>ಇಷ್ಟಲ್ಲದೇ ಡಿ.23ರಂದು ವೇಣುಗೋಪಾಲ ಅವರು ಶಶಿಕಲಾ ಅವರ ಮನೆಗೆ ಬಂದು ರಸ್ತೆ ಅಪಘಾತದಲ್ಲಿ ಗಾಯಗೊಂಡ ತನ್ನ ಮಗಳ ಚಿಕಿತ್ಸೆಗಾಗಿ ಸಾಲ ರೂಪದಲ್ಲಿ ₹2.20ಲಕ್ಷವನ್ನು ಪಡೆದಿದ್ದರು. ಆದರೆ ಇದುವರೆಗೂ ಪಡೆದ ಹಣವನ್ನು ವಾಪಾಸು ನೀಡದೇ, ಹಣದ ಕುರಿತು ವಿಚಾರಿಸಿದ ಶಶಿಕಲಾ ಅವರ ಮೊಬೈಲ್ ಸಂಖ್ಯೆಯನ್ನು ಬ್ಲಾಕ್ ಮಾಡಿ ವಂಚಿಸುತ್ತಿದ್ದಾರೆ ಎಂದು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>