ಉಡುಪಿ: ಪರ್ಯಾಯ ಉತ್ಸವದ ವೇಳೆ ಅಷ್ಠಮಠಗಳ ಮಠಾಧೀಶರನ್ನು ವಾಹನ ಸಹಿತ ಪಲ್ಲಕ್ಕಿಯಲ್ಲಿ ಕೃಷ್ಣಮಠಕ್ಕೆ ಕರೆತರುವುದು ಸಂಪ್ರದಾಯ. ಅದರಂತೆ ಅದಮಾರು ಪರ್ಯಾಯದಲ್ಲೂ ಪಲ್ಲಕ್ಕಿ ಸಿದ್ಧಗೊಂಡಿದ್ದು, ಪೇಜಾವರ ಮಠದ ವಿಶ್ವಪ್ರಸನ್ನ ಸ್ವಾಮೀಜಿಯ ಪಲ್ಲಕ್ಕಿಯನ್ನು ತೆಂಗಿನ ಗರಿ ಹಾಗೂ ಬಾಳೆ ದಿಂಡಿನಿಂದ ವಿಶೇಷವಾಗಿ ವಿನ್ಯಾಸ ಮಾಡಲಾಗಿದೆ.