ಉಡುಪಿ: ದೀಪಾವಳಿಯ ಉಡುಗೊರೆಯಾಗಿ ಶೆಫಾಲಿ ವೈದ್ಯ, ಅಮ್ರಿತಾ ಬಿಂಡರ್ ಸೇರಿದಂತೆ ಹಲವು ಮಹಿಳೆಯರಿಗೆ ಸಂಸದೆ ಶೋಭಾ ಕರಂದ್ಲಾಜೆ ಅವರು ಉಡುಪಿ ಸೀರೆಗಳನ್ನು ನೀಡಿದ್ದಾರೆ.
ಸೀರೆಗಳನ್ನು ನೋಡಿ ಟ್ವಿಟ್ಟರ್ನಲ್ಲಿ ಸಂತಸ ಹಂಚಿಕೊಂಡಿರುವ ಶೆಫಾಲಿ ವೈದ್ಯ ‘ಶೋಭಾ ಅವರಿಂದ ದೀಪಾವಳಿಗೆ ಅಚ್ಚರಿಯ ಉಡುಗೊರೆ ಸಿಕ್ಕಿದೆ. ಸ್ಥಳೀಯ ನೇಕಾರರ ಬೆಂಬಲ ನೀಡಲು ಉಡುಪಿ ಸೀರೆಯನ್ನು ನೀಡಿರುವುದು ಖುಷಿಯಾಗಿದೆ’ ಎಂದು ಬರೆದುಕೊಂಡಿದ್ದಾರೆ.
ಇದಕ್ಕೆ ಪ್ರತಿಯಾಗಿ, ಪ್ರತಿ ಶುಕ್ರವಾರ ಉಡುಪಿಯ ಕೃಷ್ಣನಿಗೂ ಉಡುಪಿ ಸೀರೆಯಿಂದ ಲಕ್ಷ್ಮಿಯ ಅಲಂಕಾರ ಮಾಡಲಾಗುತ್ತದೆ. ಅದಮಾರು ಶ್ರೀಗಳು ನೇಕಾರ ವೃತ್ತಿ ಉಳಿವಿಗೆ ಇಂತಹ ಸಂಪ್ರದಾಯ ಹುಟ್ಟುಹಾಕಿದ್ದು, ಎಲ್ಲರೂ ನೇಕಾರರ ಬೆಂಬಲಕ್ಕೆ ನಿಲ್ಲೋಣ’ ಎಂದು ಶೋಭಾ ಪ್ರತಿಕ್ರಿಯೆ ನೀಡಿದ್ದಾರೆ.
ಅಮ್ರಿತಾ ಬಿಂಡರ್ ಎಂಬುವರು ಕೂಡ ‘ಶೋಭಾ ಅವರಿಂದ ಸುಂದರವಾದ ಉಡುಪಿ ಸೀರೆ ಉಡುಗೊರೆಯಾಗಿ ಸಿಕ್ಕಿದೆ’ ಎಂದು ಸಂತಸ ಹಂಚಿಕೊಂಡಿದ್ದಾರೆ.