ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಚಿವರು, ಕಾಸರಗೋಡು ಜಿಲ್ಲೆಯ ನಲ್ಲಿಕುಂದ ಭಾಗದಲ್ಲಿ ಸೀವೇವ್ ಬ್ರೇಕರ್ ಯೋಜನೆ ಅನುಷ್ಠಾನಗೊಂಡಿದ್ದು, ಅಲ್ಲಿಗೆ ಭೇಟಿನೀಡಿ ಪರಿಶೀಲಿಸಲಾಗಿದೆ. 320 ಕಿ.ಮೀ ಕರಾವಳಿಯಲ್ಲಿ ಹೆಚ್ಚು ಕಡಲ್ಕೊರೆತ ಸಮಸ್ಯೆ ಇರುವ ಉಳ್ಳಾಲ ಹಾಗೂ ಉಚ್ಚಿಲದ ಬಟ್ಟಂಪಾಡಿಯಲ್ಲಿ ಯೋಜನೆ ಅನುಷ್ಠಾನಗೊಳಿಸುವ ಉದ್ದೇಶವಿದೆ ಎಂದರು.