<p><strong>ಬ್ರಹ್ಮಾವರ:</strong> ಉಪ್ಪೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉಡುಪಿ ಜಿಲ್ಲೆಯ ಬೀದಿ ನಾಯಿಗಳ ಆಶ್ರಯತಾಣ ನಿರ್ಮಿಸುವುದರ ವಿರುದ್ಧದ ಹೋರಾಟಕ್ಕೆ ಉಪ್ಪೂರು, ಹಾವಂಜೆ ಮತ್ತು ಆರೂರು ಗ್ರಾಮದ ಗ್ರಾಮಸ್ಥರು ಸಜ್ಜಾಗಿದ್ದಾರೆ.</p><p>ಉಪ್ಪೂರು ಗ್ರಾಮದ ಜನವಸತಿ ಪ್ರದೇಶದ ಸುಮಾರು 9 ಎಕರೆ 90 ಸೆಂಟ್ಸ್ ಪ್ರದೇಶದಲ್ಲಿ ಜಿಲ್ಲಾಡಳಿತ ನಿರ್ಮಿಸಲು ಹೊರಟಿರುವ ಈ ಆಶ್ರಯತಾಣದಿಂದ ಉಪ್ಪೂರು ಮತ್ತು ಆರೂರು ಗ್ರಾಮದ ಜನತೆ ಹೆಚ್ಚಿನ ಸಮಸ್ಯೆ ಎದುರಿಸುವ ಸಾಧ್ಯತೆ ಇದೆ. ಸರ್ಕಾರಿ ಜಾಗದಲ್ಲಿ ಉದ್ಯೋಗ ಸೃಷ್ಟಿಸಬಲ್ಲ ಅನೇಕ ಯೋಜನೆಗಳನ್ನು ತಂದಲ್ಲಿ ಪ್ರಯೋಜನವಾಗುತ್ತಿತ್ತು ಎನ್ನುವುದು ಇಲ್ಲಿಯ ಗ್ರಾಮಸ್ಥರ ಅಭಿಪ್ರಾಯವಾಗಿದೆ.</p><p>ಬೀದಿ ನಾಯಿಗಳ ಆಶ್ರಯತಾಣ ವಿರೋಧಿಸಿ ಇದೇ 6ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆಗೂ ಗ್ರಾಮಸ್ಥರು ಎಲ್ಲಾ ತಯಾರಿ ನಡೆಸಿದ್ದಾರೆ.</p><p>ಆಶ್ರಯತಾಣವು ಉಪ್ಪೂರು ಗ್ರಾಮಕ್ಕೆ ಬಂದರೆ ಗ್ರಾಮದ ಅಭಿವೃದ್ಧಿ ಸಂಪೂರ್ಣವಾಗಿ ಕುಂಠಿತವಾಗಲಿದೆ. ಪ್ರಸ್ತುತ ಉಪ್ಪೂರು, ಹಾವಂಜೆ ಮತ್ತು ಆರೂರು ಗ್ರಾಮ ಶೀಂಬ್ರ ಸೇತುವೆಯಿಂದಾಗಿ ಮಣಿಪಾಲಕ್ಕೆ ಹತ್ತಿರವಾಗಿ ಈ ಮೂರೂ ಗ್ರಾಮಗಳು ಅಭಿವೃದ್ಧಿಗೊಳ್ಳುತ್ತಿದೆ. ಇಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು, ತಾಲ್ಲೂಕು ಕ್ರೀಡಾಂಗಣ, ಸ್ನಾತಕೋತ್ತರ ಅಧ್ಯಯನ ಕೇಂದ್ರ, ವಸತಿ ರಹಿತರಿಗೆ ನಿವೇಶನ ವ್ಯವಸ್ಥೆ ಸೇರಿದಂತೆ ಯಾವುದೇ ಜನೋಪಯೋಗಿ ಅಭಿವೃದ್ದಿ ಕಾರ್ಯಕ್ರಮಗಳನ್ನು ಕೈಗೊಳ್ಳಲು ಸಾಧ್ಯ ಇರುವುದರಿಂದ ಈ ಬಗ್ಗೆ ಅಧಿಕಾರಿಗಳು ಗಮನ ನೀಡಲಿ ಎಂದು ಸಾಮಾಜಿಕ ಕಾರ್ಯಕರ್ತ ಸತೀಶ ಪೂಜಾರಿ ಕೀಳಂಜೆ ಮತ್ತು ತುಳುನಾಡ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ ಶೆಟ್ಟಿ ತಿಳಿಸಿದ್ದಾರೆ.</p><p>‘ಉಪ್ಪೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈ ಪ್ರದೇಶದಲ್ಲಿ 200ಕ್ಕೂ ಹೆಚ್ಚು ಕುಟುಂಬಗಳಿಗೆ ಹಕ್ಕುಪತ್ರ ಸಿಕ್ಕಿಲ್ಲ. ನಾಯಿಗಳ ಆಶ್ರಯತಾಣಕ್ಕೆ ನಿಗದಿ ಪಡಿಸಿದ ಜಾಗದಲ್ಲಿಯೇ ಪಂಚಾಯಿತಿ ನಿವೇಶನಕ್ಕೆ ಜಾಗವನ್ನು ಕಾಯ್ದಿರಿಸಲಾಗಿತ್ತು. ಆದರೆ ಈಗ ಜಿಲ್ಲಾಡಳಿತ ನಾಯಿಗಳ ಆಶ್ರಯತಾಣವನ್ನಾಗಿ ಮಾಡಲು ಹೊರಟಿದೆ. ಮುಂದಾಗುವ ಸಮಸ್ಯೆಗಳಿಗೆ ಹೊಣೆ ಯಾರು ? ಇದಲ್ಲದೇ ಪಂಚಾಯಿತಿಗೆ ಕೂಡ ಈ ಪ್ರದೇಶದ ಸರ್ವೆ ಕಾರ್ಯ ನಡೆಸಿದ ಬಗ್ಗೆ ಮಾಹಿತಿ ಇಲ್ಲ. ಅವರ ಗಮನಕ್ಕೂ ತಾರದೇ ಇಲ್ಲಿ ಹೇಗೆ ಆಶ್ರಯತಾಣ ನಿರ್ಮಿಸಲು ಜಿಲ್ಲಾಡಳಿತ ಹೊರಟಿದೆ’ ಎಂದು ಸ್ಥಳೀಯ ನಿವಾಸಿ ಅಶ್ವಿನ್ ಪಿ. ರೋಚ್ ಪ್ರಶ್ನಿಸಿದ್ದಾರೆ.</p><p>ಉಪ್ಪೂರಿನಲ್ಲಿ ಬೀದಿನಾಯಿ ಆಶ್ರಯತಾಣ ನಿರ್ಮಾಣದಿಂದ ಗ್ರಾಮಕ್ಕೆ, ಗ್ರಾಮಸ್ಥರಿಗೆ ಏನೂ ಪ್ರಯೋಜನವಿಲ್ಲ. ಬದಲಾಗಿ ಜನವಸತಿ ಇರುವ ಪ್ರದೇಶವಾದ ಕಾರಣ ಪರಿಸರದ ಮೇಲಾಗುವ ವಾಯುಮಾಲಿನ್ಯ, ಶಬ್ದಮಾಲಿನ್ಯ ಜನರ ನೆಮ್ಮದಿ ಕೆಡಿಸುವ ಜತೆಗೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಸ್ಥಳೀಯರು ಹೇಳಿದ್ದಾರೆ.</p><p>ನೀರಿನ ಸೆಲೆ ಇರುವ ಈ ಸ್ಥಳದಿಂದ ಮಡಿಸಾಲು ಹೊಳೆಗೆ ನೀರು ಸೇರುವುದರಿಂದ ಮುಂದೆ, ಬಾವಿಗಳ ಅಂತರ್ಜಲದ ಮೇಲೂ ಪರಿಣಾಮ ಉಂಟಾಗಿ ಅದೂ ಅನೇಕ ಆರೋಗ್ಯ ಸಮಸ್ಯೆ ಸೃಷ್ಟಿಸುವುದು ಖಚಿತ. ಈ ಜಾಗ ಜನೋಪಯೋಗಿ ಜನಪರ, ಪರಿಸರಸ್ನೇಹಿ ಯೋಜನೆಗಳಿಗೆ ಬಳಕೆಯಾಗಲಿ ಎಂದೂ ಆಗ್ರಹಿಸಿದ್ದಾರೆ.</p><p>‘ಜನರ ವಿರೋಧವನ್ನು ಲೆಕ್ಕಿಸದೆ ಜಿಲ್ಲಾಡಳಿತ ಆಶ್ರಯತಾಣ ನಿರ್ಮಾಣಕ್ಕೆ ಮುಂದಾದರೆ ಉಗ್ರ ಪ್ರತಿಭಟನೆ ಎದುರಿಸಬೇಕಾದೀತು’ ಎಂದು ಉಪ್ಪೂರು ಸಿ.ಎ. ಬ್ಯಾಂಕ್ನ ನಿರ್ದೇಶಕ ಹಾಗೂ ಸ್ಥಳೀಯ ನಿವಾಸಿ ರಮೇಶ ಕರ್ಕೆರಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.</p><p>ಬೀದಿನಾಯಿಗಳ ಆಶ್ರಯತಾಣ ನಿರ್ಮಿಸುವ ನಿರ್ಧಾರದ ವಿರುದ್ಧ ಪಕ್ಷಾತೀತವಾಗಿ ಹೋರಾಟಕ್ಕೆ ಗ್ರಾಮಸ್ಥರು ಸಿದ್ಧರಾಗಿದ್ದಾರೆ. ಪ್ರತಿಭಟನೆಗಾಗಿ ಹಲವು ಸಮಿತಿಯನ್ನು ಮಾಡಿ ಜವಾಬ್ದಾರಿಗಳನ್ನು ಹಂಚಿಕೊಂಡಿದ್ದಾರೆ.</p>.<div><blockquote>ವಾಯು ಮಾಲಿನ್ಯ, ಶಬ್ದ ಮಾಲಿನ್ಯ, ಜಲ ಮಾಲಿನ್ಯ ತರುವಂತಹ ಯೋಜನೆ ನಮಗೆ ಬೇಡ. ಯುವಜನರಿಗೆ ಉದ್ಯೋಗ ನೀಡುವ ಯೋಜನೆಗಳು ಬರಲಿ</blockquote><span class="attribution">ರಮೇಶ ಕರ್ಕೆರ, ಸ್ಥಳೀಯ ನಿವಾಸಿ</span></div>.<div><blockquote>ನಂದಿನಿ ಡೇರಿ, ಶಾಲೆ, ಜನವಸತಿ ಪ್ರದೇಶದಲ್ಲಿ ನಾಯಿಗಳನ್ನು ತಂದು ಬಿಡುವುದರಿಂದ ಅನೇಕ ಸಾಂಕ್ರಾಮಿಕ ರೋಗಗಳು ಕಾಣಿಸಕೊಳ್ಳಬಹುದು </blockquote><span class="attribution">ಅಶ್ವಿನ್ ಕೆ. ರೋಚ್, ಸ್ಥಳೀಯ ನಿವಾಸಿ </span></div>.<div><blockquote>ಮೂರು ಗ್ರಾಮದ ಅಭಿವೃದ್ಧಿಗೆ ಬೇಕಾದ ಯೋಜನೆಗಳನ್ನು ತಂದಲ್ಲಿ ಎಲ್ಲರಿಗೂ ಪ್ರಯೋಜನವಾಗಲಿದೆ. ಆದರೆ ಸಮಸ್ಯೆಗಳನ್ನು ತರುವ ಬೀದಿನಾಯಿಗಳ ಆಶ್ರಯತಾಣ ಇಲ್ಲಿ ಬೇಡವೇ ಬೇಡ </blockquote><span class="attribution">ಉಮೇಶ ಶೆಟ್ಟಿ, ಸ್ಥಳೀಯ ನಿವಾಸಿ </span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬ್ರಹ್ಮಾವರ:</strong> ಉಪ್ಪೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉಡುಪಿ ಜಿಲ್ಲೆಯ ಬೀದಿ ನಾಯಿಗಳ ಆಶ್ರಯತಾಣ ನಿರ್ಮಿಸುವುದರ ವಿರುದ್ಧದ ಹೋರಾಟಕ್ಕೆ ಉಪ್ಪೂರು, ಹಾವಂಜೆ ಮತ್ತು ಆರೂರು ಗ್ರಾಮದ ಗ್ರಾಮಸ್ಥರು ಸಜ್ಜಾಗಿದ್ದಾರೆ.</p><p>ಉಪ್ಪೂರು ಗ್ರಾಮದ ಜನವಸತಿ ಪ್ರದೇಶದ ಸುಮಾರು 9 ಎಕರೆ 90 ಸೆಂಟ್ಸ್ ಪ್ರದೇಶದಲ್ಲಿ ಜಿಲ್ಲಾಡಳಿತ ನಿರ್ಮಿಸಲು ಹೊರಟಿರುವ ಈ ಆಶ್ರಯತಾಣದಿಂದ ಉಪ್ಪೂರು ಮತ್ತು ಆರೂರು ಗ್ರಾಮದ ಜನತೆ ಹೆಚ್ಚಿನ ಸಮಸ್ಯೆ ಎದುರಿಸುವ ಸಾಧ್ಯತೆ ಇದೆ. ಸರ್ಕಾರಿ ಜಾಗದಲ್ಲಿ ಉದ್ಯೋಗ ಸೃಷ್ಟಿಸಬಲ್ಲ ಅನೇಕ ಯೋಜನೆಗಳನ್ನು ತಂದಲ್ಲಿ ಪ್ರಯೋಜನವಾಗುತ್ತಿತ್ತು ಎನ್ನುವುದು ಇಲ್ಲಿಯ ಗ್ರಾಮಸ್ಥರ ಅಭಿಪ್ರಾಯವಾಗಿದೆ.</p><p>ಬೀದಿ ನಾಯಿಗಳ ಆಶ್ರಯತಾಣ ವಿರೋಧಿಸಿ ಇದೇ 6ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆಗೂ ಗ್ರಾಮಸ್ಥರು ಎಲ್ಲಾ ತಯಾರಿ ನಡೆಸಿದ್ದಾರೆ.</p><p>ಆಶ್ರಯತಾಣವು ಉಪ್ಪೂರು ಗ್ರಾಮಕ್ಕೆ ಬಂದರೆ ಗ್ರಾಮದ ಅಭಿವೃದ್ಧಿ ಸಂಪೂರ್ಣವಾಗಿ ಕುಂಠಿತವಾಗಲಿದೆ. ಪ್ರಸ್ತುತ ಉಪ್ಪೂರು, ಹಾವಂಜೆ ಮತ್ತು ಆರೂರು ಗ್ರಾಮ ಶೀಂಬ್ರ ಸೇತುವೆಯಿಂದಾಗಿ ಮಣಿಪಾಲಕ್ಕೆ ಹತ್ತಿರವಾಗಿ ಈ ಮೂರೂ ಗ್ರಾಮಗಳು ಅಭಿವೃದ್ಧಿಗೊಳ್ಳುತ್ತಿದೆ. ಇಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು, ತಾಲ್ಲೂಕು ಕ್ರೀಡಾಂಗಣ, ಸ್ನಾತಕೋತ್ತರ ಅಧ್ಯಯನ ಕೇಂದ್ರ, ವಸತಿ ರಹಿತರಿಗೆ ನಿವೇಶನ ವ್ಯವಸ್ಥೆ ಸೇರಿದಂತೆ ಯಾವುದೇ ಜನೋಪಯೋಗಿ ಅಭಿವೃದ್ದಿ ಕಾರ್ಯಕ್ರಮಗಳನ್ನು ಕೈಗೊಳ್ಳಲು ಸಾಧ್ಯ ಇರುವುದರಿಂದ ಈ ಬಗ್ಗೆ ಅಧಿಕಾರಿಗಳು ಗಮನ ನೀಡಲಿ ಎಂದು ಸಾಮಾಜಿಕ ಕಾರ್ಯಕರ್ತ ಸತೀಶ ಪೂಜಾರಿ ಕೀಳಂಜೆ ಮತ್ತು ತುಳುನಾಡ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ ಶೆಟ್ಟಿ ತಿಳಿಸಿದ್ದಾರೆ.</p><p>‘ಉಪ್ಪೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈ ಪ್ರದೇಶದಲ್ಲಿ 200ಕ್ಕೂ ಹೆಚ್ಚು ಕುಟುಂಬಗಳಿಗೆ ಹಕ್ಕುಪತ್ರ ಸಿಕ್ಕಿಲ್ಲ. ನಾಯಿಗಳ ಆಶ್ರಯತಾಣಕ್ಕೆ ನಿಗದಿ ಪಡಿಸಿದ ಜಾಗದಲ್ಲಿಯೇ ಪಂಚಾಯಿತಿ ನಿವೇಶನಕ್ಕೆ ಜಾಗವನ್ನು ಕಾಯ್ದಿರಿಸಲಾಗಿತ್ತು. ಆದರೆ ಈಗ ಜಿಲ್ಲಾಡಳಿತ ನಾಯಿಗಳ ಆಶ್ರಯತಾಣವನ್ನಾಗಿ ಮಾಡಲು ಹೊರಟಿದೆ. ಮುಂದಾಗುವ ಸಮಸ್ಯೆಗಳಿಗೆ ಹೊಣೆ ಯಾರು ? ಇದಲ್ಲದೇ ಪಂಚಾಯಿತಿಗೆ ಕೂಡ ಈ ಪ್ರದೇಶದ ಸರ್ವೆ ಕಾರ್ಯ ನಡೆಸಿದ ಬಗ್ಗೆ ಮಾಹಿತಿ ಇಲ್ಲ. ಅವರ ಗಮನಕ್ಕೂ ತಾರದೇ ಇಲ್ಲಿ ಹೇಗೆ ಆಶ್ರಯತಾಣ ನಿರ್ಮಿಸಲು ಜಿಲ್ಲಾಡಳಿತ ಹೊರಟಿದೆ’ ಎಂದು ಸ್ಥಳೀಯ ನಿವಾಸಿ ಅಶ್ವಿನ್ ಪಿ. ರೋಚ್ ಪ್ರಶ್ನಿಸಿದ್ದಾರೆ.</p><p>ಉಪ್ಪೂರಿನಲ್ಲಿ ಬೀದಿನಾಯಿ ಆಶ್ರಯತಾಣ ನಿರ್ಮಾಣದಿಂದ ಗ್ರಾಮಕ್ಕೆ, ಗ್ರಾಮಸ್ಥರಿಗೆ ಏನೂ ಪ್ರಯೋಜನವಿಲ್ಲ. ಬದಲಾಗಿ ಜನವಸತಿ ಇರುವ ಪ್ರದೇಶವಾದ ಕಾರಣ ಪರಿಸರದ ಮೇಲಾಗುವ ವಾಯುಮಾಲಿನ್ಯ, ಶಬ್ದಮಾಲಿನ್ಯ ಜನರ ನೆಮ್ಮದಿ ಕೆಡಿಸುವ ಜತೆಗೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಸ್ಥಳೀಯರು ಹೇಳಿದ್ದಾರೆ.</p><p>ನೀರಿನ ಸೆಲೆ ಇರುವ ಈ ಸ್ಥಳದಿಂದ ಮಡಿಸಾಲು ಹೊಳೆಗೆ ನೀರು ಸೇರುವುದರಿಂದ ಮುಂದೆ, ಬಾವಿಗಳ ಅಂತರ್ಜಲದ ಮೇಲೂ ಪರಿಣಾಮ ಉಂಟಾಗಿ ಅದೂ ಅನೇಕ ಆರೋಗ್ಯ ಸಮಸ್ಯೆ ಸೃಷ್ಟಿಸುವುದು ಖಚಿತ. ಈ ಜಾಗ ಜನೋಪಯೋಗಿ ಜನಪರ, ಪರಿಸರಸ್ನೇಹಿ ಯೋಜನೆಗಳಿಗೆ ಬಳಕೆಯಾಗಲಿ ಎಂದೂ ಆಗ್ರಹಿಸಿದ್ದಾರೆ.</p><p>‘ಜನರ ವಿರೋಧವನ್ನು ಲೆಕ್ಕಿಸದೆ ಜಿಲ್ಲಾಡಳಿತ ಆಶ್ರಯತಾಣ ನಿರ್ಮಾಣಕ್ಕೆ ಮುಂದಾದರೆ ಉಗ್ರ ಪ್ರತಿಭಟನೆ ಎದುರಿಸಬೇಕಾದೀತು’ ಎಂದು ಉಪ್ಪೂರು ಸಿ.ಎ. ಬ್ಯಾಂಕ್ನ ನಿರ್ದೇಶಕ ಹಾಗೂ ಸ್ಥಳೀಯ ನಿವಾಸಿ ರಮೇಶ ಕರ್ಕೆರಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.</p><p>ಬೀದಿನಾಯಿಗಳ ಆಶ್ರಯತಾಣ ನಿರ್ಮಿಸುವ ನಿರ್ಧಾರದ ವಿರುದ್ಧ ಪಕ್ಷಾತೀತವಾಗಿ ಹೋರಾಟಕ್ಕೆ ಗ್ರಾಮಸ್ಥರು ಸಿದ್ಧರಾಗಿದ್ದಾರೆ. ಪ್ರತಿಭಟನೆಗಾಗಿ ಹಲವು ಸಮಿತಿಯನ್ನು ಮಾಡಿ ಜವಾಬ್ದಾರಿಗಳನ್ನು ಹಂಚಿಕೊಂಡಿದ್ದಾರೆ.</p>.<div><blockquote>ವಾಯು ಮಾಲಿನ್ಯ, ಶಬ್ದ ಮಾಲಿನ್ಯ, ಜಲ ಮಾಲಿನ್ಯ ತರುವಂತಹ ಯೋಜನೆ ನಮಗೆ ಬೇಡ. ಯುವಜನರಿಗೆ ಉದ್ಯೋಗ ನೀಡುವ ಯೋಜನೆಗಳು ಬರಲಿ</blockquote><span class="attribution">ರಮೇಶ ಕರ್ಕೆರ, ಸ್ಥಳೀಯ ನಿವಾಸಿ</span></div>.<div><blockquote>ನಂದಿನಿ ಡೇರಿ, ಶಾಲೆ, ಜನವಸತಿ ಪ್ರದೇಶದಲ್ಲಿ ನಾಯಿಗಳನ್ನು ತಂದು ಬಿಡುವುದರಿಂದ ಅನೇಕ ಸಾಂಕ್ರಾಮಿಕ ರೋಗಗಳು ಕಾಣಿಸಕೊಳ್ಳಬಹುದು </blockquote><span class="attribution">ಅಶ್ವಿನ್ ಕೆ. ರೋಚ್, ಸ್ಥಳೀಯ ನಿವಾಸಿ </span></div>.<div><blockquote>ಮೂರು ಗ್ರಾಮದ ಅಭಿವೃದ್ಧಿಗೆ ಬೇಕಾದ ಯೋಜನೆಗಳನ್ನು ತಂದಲ್ಲಿ ಎಲ್ಲರಿಗೂ ಪ್ರಯೋಜನವಾಗಲಿದೆ. ಆದರೆ ಸಮಸ್ಯೆಗಳನ್ನು ತರುವ ಬೀದಿನಾಯಿಗಳ ಆಶ್ರಯತಾಣ ಇಲ್ಲಿ ಬೇಡವೇ ಬೇಡ </blockquote><span class="attribution">ಉಮೇಶ ಶೆಟ್ಟಿ, ಸ್ಥಳೀಯ ನಿವಾಸಿ </span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>