‘ಲೌಕಿಕತೆಗೆ ಅಲೌಕಿಕತೆಯ ಮೆರುಗು’
ಉಡುಪಿಯ ಪೂರ್ಣ ಪ್ರಜ್ಞ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ರಮೇಶ್ ಟಿ.ಎಸ್. ಮಾತನಾಡಿ ವಾದಿರಾಜರು ಪರಮ ಧಾರ್ಮಿಕರಾಗಿಯೂ ಸಾಮಾಜಿಕ ಸುಧಾರಕರಾಗಿಯೂ ದಾರಿದೀಪವಾಗಿದ್ದಾರೆ ಎಂದರು. ಲೌಕಿಕತೆಗೆ ಅಲೌಕಿಕತೆಯ ಮೆರುಗು ನೀಡಿ ಹಾಡಿನ ಮೂಲಕ ಭಾಗವತ ಪರಂಪರೆಯನ್ನು ನಾಡಿಗೆ ನೀಡುವ ಕೆಲಸವನ್ನು ವಾದಿರಾಜರು ಮಾಡಿದ್ದರು ಎಂದು ಹೇಳಿದರು. ಕನಕದಾಸರು ಅತೀ ಸರಳವಾದ ಕೀರ್ತನೆಗಳ ಮೂಲಕ ಜಗತ್ತಿನ ಉದ್ಧಾರಕ್ಕೆ ಶ್ರಮಿಸಿದ್ದರು. ಅವರ ಭಾಷಾಸಾಹಿತ್ಯವು ಅಸಾಧಾರಣವಾಗಿತ್ತು ಎಂದರು.