‘ಸಕಲ ಸಿದ್ಧತೆ ಮಾಡಿಕೊಂಡಿದ್ದೇವೆ’
ಈ ಬಾರಿ ನಗರ ನಿವಾಸಿಗಳಿಗೆ ನಿರಿನ ಸಮಸ್ಯೆ ಕಾಡಬಾರದು ಎಂಬ ನಿಟ್ಟಿನಲ್ಲಿ ಸಕಲ ಸಿದ್ಧತೆ ಮಾಡಿಕೊಂಡಿದ್ದೇವೆ. ನಗರಸಭೆ ಅಧೀನದ ಕೊಳವೆ ಬಾವಿಗಳಿಗೆ ಮಳೆ ನೀರು ಮರುಪೂರಣ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಹಲವು ಬಾವಿಗಳನ್ನು ಸ್ವಚ್ಛವಾಗಿಟ್ಟುಕೊಂಡಿದ್ದೇವೆ. ಈ ಸಲ ವಾರಾಹಿ ನೀರು ಬಂದಿರುವುದರಿಂದ ಶೇ 100 ರಷ್ಟು ನೀರಿನ ಸಮಸ್ಯೆ ಕಾಡದು ಎಂಬ ವಿಶ್ವಾಸವಿದೆ ಎಂದು ನಗರಸಭೆಯ ಹೆಚ್ಚುವರಿ ಪ್ರಭಾರ ಪೌರಾಯುಕ್ತ ಉದಯ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ. ಜೂನ್ವರೆಗೆ ಮಳೆ ಬಾರದೆ ಇದ್ದರೆ ಬಜೆ ಜಲಶಯದಲ್ಲಿ ಡ್ರಜ್ಜಿಂಗ್ ಮಾಡಿ ನೀರು ಹಾಯಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ. ಆದರೂ ನಗರವಾಸಿಗಳು ನೀರನ್ನು ಎಚ್ಚರಿಕೆಯಿಂದ ಬಳಕೆ ಮಾಡಬೇಕು ಎಂದು ಅವರು ಹೇಳಿದರು.