ಮಂದಾರ್ತಿ, ಕಾಡೂರು ಕೊಕ್ಕರ್ಣೆ ಮಾರ್ಗವಾಗಿ ನಡೂರು ಸೇರಿದಂತೆ ನಾಲ್ಕೂರು, ಸಂತೆಕಟ್ಟೆ, ಹೆಬ್ರಿ, ಬ್ರಹ್ಮಾವರ ಸಂಪರ್ಕಿಸುವ ಪ್ರಮುಖ ರಸ್ತೆ ಇದು. ಸ್ಥಳೀಯರ ವಿರೋಧದ ನಡುವೆಯೂ ಇಲ್ಲಿ ವಾರಾಹಿ ಕುಡಿಯುವ ನೀರು ಸಾಗಿಸುವುದಕ್ಕಾಗಿ ಪೈಪ್ ಅಳವಡಿಸುವುದಕ್ಕಾಗಿ ರಸ್ತೆಯ ಬದಿಯನ್ನು ಅಗೆಯಲಾಗಿದೆ. ಅಸಮರ್ಪಕ ಕಾಮಗಾರಿಯಿಂದಾಗಿ ಇಲ್ಲಿ ಹೊಂಡ ಉಂಟಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.