ತೊಟ್ಟಿಗಳನ್ನು ಕಟ್ಟಲು ಮಕ್ಕಳೂ ಸಹಕಾರ ನೀಡಿದರು. ದೂರದಿಂದ ತಳ್ಳುಗಾಡಿಯಲ್ಲಿ ನೀರು ತಂದು ಕೊಟ್ಟರು. ಈಗ ಪ್ರತಿದಿನ ಜಿಂಕೆ, ಕಾಡುಕೋಣ, ಕಾಡುಹಂದಿ, ಕಾಡು ಕೋಳಿ, ನವಿಲು, ಮಂಗಗಳು ಸಂತೃಪ್ತಿಯಾಗಿ ನೀರು ಕುಡಿದು ಕಾಡಿಗೆ ಮರಳುತ್ತಿವೆ. ಈ ದೃಶ್ಯವನ್ನು ಕಂಡರೆ ಪ್ರಕೃತಿಯ ಅಲ್ಪ ಋಣ ತೀರಿಸಿದ ಸಂತೃಪ್ತ ಭಾವ ಮೂಡುತ್ತದೆ ಎಂದರು ಜಯಕರ ಪೂಜಾರಿ.