<p><strong>ಉಡುಪಿ</strong>: ಬೈಲೂರಿನ ಉಮಿಕ್ಕಳ ಬೆಟ್ಟದ ಮೇಲೆ ಸ್ಥಾಪಿಸಿದ್ದ ಪರಶುರಾಮ ಮೂರ್ತಿಯ ಸೊಂಟದ ಮೇಲಿನ ಭಾಗ ಎಲ್ಲಿದೆ ಎಂದು ಕಾರ್ಕಳದ ಕಾಂಗ್ರೆಸ್ ಮುಖಂಡ ಉದಯಕುಮಾರ್ ಮುನಿಯಾಲು ಪ್ರಶ್ನಿಸಿದರು.</p><p>ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಜಿಲ್ಲಾಧಿಕಾರಿ ಈ ಬಗ್ಗೆ ಮುತುವರ್ಜಿ ವಹಿಸಿ ಮೂರ್ತಿಯ ಅರ್ಧಭಾಗ ಎಲ್ಲಿದೆ ಎಂಬುದನ್ನು ಕಂಡು ಹಿಡಿಯಬೇಕು ಎಂದು ಅವರು ಒತ್ತಾಯಿಸಿದರು.</p><p>ಪರಶುರಾಮ ಥೀಂ ಪಾರ್ಕ್ ಸ್ಥಾಪಿಸುವುದರ ಹಿಂದೆ ಬೈಲೂರಿಗೆ ಹೊಸ ಕಳೆ ತರುವ ಉದ್ದೇಶವಿರಲಿಲ್ಲ ಎಂಬುದು ಈಗ ತಿಳಿಯುತ್ತಿದೆ ಎಂದರು.</p><p>ಮುಖ್ಯಮಂತ್ರಿಯನ್ನು ಕರೆದು ನಕಲಿ ಮೂರ್ತಿಯನ್ನು ಉದ್ಘಾಟನೆ ಮಾಡಿಸಿರುವುದು ಇಡೀ ಜಿಲ್ಲೆಗೆ ಮಾಡಿದ ಅವಮಾನ. ಈಗಾಗಲೇ ಬೆಟ್ಟದ ಮೇಲೆ ಪರಶುರಾಮ ಮೂರ್ತಿಯ ಎರಡು ಕಾಲುಗಳಿವೆ. ಕಾರ್ಕಳ ಪೊಲೀಸರು ಜಪ್ತಿ ಮಾಡಿರುವುದರಲ್ಲೂ ಎರಡು ಕಾಲುಗಳಿವೆ. ನಾಲ್ಕು ಕಾಲುಗಳು ಯಾಕೆ ಎಂದೂ ಅವರು ಪ್ರಶ್ನಿಸಿದರು.</p><p>ಪೊಲೀಸರಿಗೆ ಮೂರ್ತಿಯ ಎರಡು ಕಾಲುಗಳು ಸಿಕ್ಕಿರುವುದರಿಂದ ಬೆಟ್ಟದ ಮೇಲಿರುವ ಮೂರ್ತಿಯ ಕಾಲುಗಳು ನಕಲಿ ಎಂಬುದು ಸಾಬೀತಾಗಿದೆ ಎಂದೂ ಅವರು ಹೇಳಿದರು.</p><p>ಒಂದು ವೇಳೆ ನಕಲಿ ಮೂರ್ತಿ ಮುರಿದು ಬಿದ್ದು, ಪ್ರವಾಸಿಗರಿಗೆ ಏನಾದರೂ ಅನಾಹುತವಾಗಿದ್ದರೆ ಯಾರು ಹೊಣೆ ಎಂದೂ ಪ್ರಶ್ನಿಸಿದ್ದಾರೆ.</p><p>2022ರಲ್ಲಿ ನಿರ್ಮಿತಿ ಕೇಂದ್ರದಿಂದ ಶಿಲ್ಪಿ ಕೃಷ್ಣ ನಾಯಕ್ ಅವರಿಗೆ ₹1 ಕೋಟಿ ನೀಡಲಾಗಿದೆ. ಈ ಹಣದಿಂದ ಅವರು ಕಂಚು ತಂದಿಲ್ಲ. ಜಿಎಸ್ಟಿಯನ್ನೂ ಕಟ್ಟಿಲ್ಲ. ಈ ಮೂಲಕ ಜನರನ್ನು ಮೂರ್ಖರನ್ನಾಗಿಸಿದ್ದಾರೆ. ₹1 ಕೋಟಿ ಪಡೆದಿರುವ ಕೃಷ್ಣ ನಾಯಕ್ ಅವರು, ತಾವು ಬಡ ಶಿಲ್ಪಿ ಎನ್ನುತ್ತಿದ್ದಾರೆ ಎಂದರು.</p><p>ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ದೀಪಕ್ ಕೋಟ್ಯಾನ್, ಸುಭೀತ್ ಕುಮಾರ್, ಜ್ಯೋತಿ ಹೆಬ್ಬಾರ್, ರಮೇಶ್ ಕಾಂಚನ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ</strong>: ಬೈಲೂರಿನ ಉಮಿಕ್ಕಳ ಬೆಟ್ಟದ ಮೇಲೆ ಸ್ಥಾಪಿಸಿದ್ದ ಪರಶುರಾಮ ಮೂರ್ತಿಯ ಸೊಂಟದ ಮೇಲಿನ ಭಾಗ ಎಲ್ಲಿದೆ ಎಂದು ಕಾರ್ಕಳದ ಕಾಂಗ್ರೆಸ್ ಮುಖಂಡ ಉದಯಕುಮಾರ್ ಮುನಿಯಾಲು ಪ್ರಶ್ನಿಸಿದರು.</p><p>ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಜಿಲ್ಲಾಧಿಕಾರಿ ಈ ಬಗ್ಗೆ ಮುತುವರ್ಜಿ ವಹಿಸಿ ಮೂರ್ತಿಯ ಅರ್ಧಭಾಗ ಎಲ್ಲಿದೆ ಎಂಬುದನ್ನು ಕಂಡು ಹಿಡಿಯಬೇಕು ಎಂದು ಅವರು ಒತ್ತಾಯಿಸಿದರು.</p><p>ಪರಶುರಾಮ ಥೀಂ ಪಾರ್ಕ್ ಸ್ಥಾಪಿಸುವುದರ ಹಿಂದೆ ಬೈಲೂರಿಗೆ ಹೊಸ ಕಳೆ ತರುವ ಉದ್ದೇಶವಿರಲಿಲ್ಲ ಎಂಬುದು ಈಗ ತಿಳಿಯುತ್ತಿದೆ ಎಂದರು.</p><p>ಮುಖ್ಯಮಂತ್ರಿಯನ್ನು ಕರೆದು ನಕಲಿ ಮೂರ್ತಿಯನ್ನು ಉದ್ಘಾಟನೆ ಮಾಡಿಸಿರುವುದು ಇಡೀ ಜಿಲ್ಲೆಗೆ ಮಾಡಿದ ಅವಮಾನ. ಈಗಾಗಲೇ ಬೆಟ್ಟದ ಮೇಲೆ ಪರಶುರಾಮ ಮೂರ್ತಿಯ ಎರಡು ಕಾಲುಗಳಿವೆ. ಕಾರ್ಕಳ ಪೊಲೀಸರು ಜಪ್ತಿ ಮಾಡಿರುವುದರಲ್ಲೂ ಎರಡು ಕಾಲುಗಳಿವೆ. ನಾಲ್ಕು ಕಾಲುಗಳು ಯಾಕೆ ಎಂದೂ ಅವರು ಪ್ರಶ್ನಿಸಿದರು.</p><p>ಪೊಲೀಸರಿಗೆ ಮೂರ್ತಿಯ ಎರಡು ಕಾಲುಗಳು ಸಿಕ್ಕಿರುವುದರಿಂದ ಬೆಟ್ಟದ ಮೇಲಿರುವ ಮೂರ್ತಿಯ ಕಾಲುಗಳು ನಕಲಿ ಎಂಬುದು ಸಾಬೀತಾಗಿದೆ ಎಂದೂ ಅವರು ಹೇಳಿದರು.</p><p>ಒಂದು ವೇಳೆ ನಕಲಿ ಮೂರ್ತಿ ಮುರಿದು ಬಿದ್ದು, ಪ್ರವಾಸಿಗರಿಗೆ ಏನಾದರೂ ಅನಾಹುತವಾಗಿದ್ದರೆ ಯಾರು ಹೊಣೆ ಎಂದೂ ಪ್ರಶ್ನಿಸಿದ್ದಾರೆ.</p><p>2022ರಲ್ಲಿ ನಿರ್ಮಿತಿ ಕೇಂದ್ರದಿಂದ ಶಿಲ್ಪಿ ಕೃಷ್ಣ ನಾಯಕ್ ಅವರಿಗೆ ₹1 ಕೋಟಿ ನೀಡಲಾಗಿದೆ. ಈ ಹಣದಿಂದ ಅವರು ಕಂಚು ತಂದಿಲ್ಲ. ಜಿಎಸ್ಟಿಯನ್ನೂ ಕಟ್ಟಿಲ್ಲ. ಈ ಮೂಲಕ ಜನರನ್ನು ಮೂರ್ಖರನ್ನಾಗಿಸಿದ್ದಾರೆ. ₹1 ಕೋಟಿ ಪಡೆದಿರುವ ಕೃಷ್ಣ ನಾಯಕ್ ಅವರು, ತಾವು ಬಡ ಶಿಲ್ಪಿ ಎನ್ನುತ್ತಿದ್ದಾರೆ ಎಂದರು.</p><p>ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ದೀಪಕ್ ಕೋಟ್ಯಾನ್, ಸುಭೀತ್ ಕುಮಾರ್, ಜ್ಯೋತಿ ಹೆಬ್ಬಾರ್, ರಮೇಶ್ ಕಾಂಚನ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>