ಕಾರವಾರ: ಉತ್ತರ ಕನ್ನಡಲೋಕಸಭಾ ಕ್ಷೇತ್ರದ ಚುನಾವಣಾ ಕಣದಿಂದ ಇಬ್ಬರು ನಾಮಪತ್ರವನ್ನು ಸೋಮವಾರ ಹಿಂತೆಗೆದುಕೊಂಡಿದ್ದಾರೆ.ಅಂತಿಮವಾಗಿ 13 ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ.
ಪಕ್ಷೇತರ ಅಭ್ಯರ್ಥಿಗಳಾದ ದಾಂಡೇಲಿಯ ರಾಜಶೇಖರ ಬೆಳ್ಳಿಗಟ್ಟಿ ಹಾಗೂ ಶಿರಸಿಯ ನೈಮುರ್ ರೆಹಮಾನ್ ಜೈಲರ್ ಅವರು ತಮ್ಮಉಮೇದುವಾರಿಕೆಯನ್ನುಹಿಂಪಡೆದಿದ್ದಾರೆ. ಸ್ಪರ್ಧೆ ಬಯಸಿ ಇಬ್ಬರುಮಹಿಳಾ ಅಭ್ಯರ್ಥಿಗಳು ಸೇರಿದಂತೆ ಒಟ್ಟು 17 ಮಂದಿಯಿಂದ 27 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಇವುಗಳಲ್ಲಿಇಬ್ಬರ ನಾಮಪತ್ರತಿರಸ್ಕೃತಗೊಂಡಿದ್ದವು.
ಇದೀಗ ಅಂತಿಮವಾಗಿ ರಾಷ್ಟ್ರೀಯ ಪಕ್ಷದ ಒಬ್ಬ ಅಭ್ಯರ್ಥಿ, ಪ್ರಾದೇಶಿಕ ಪಕ್ಷಗಳ ಇಬ್ಬರು, ನೋಂದಾಯಿತ ರಾಜಕೀಯ ಪಕ್ಷಗಳಿಂದ ನಾಲ್ವರು ಹಾಗೂ ಆರು ಮಂದಿ ಪಕ್ಷೇತರರು ಈ ಬಾರಿಯ ಲೋಕಸಭಾ ಚುನಾವಣೆಯಕಣದಲ್ಲಿದ್ದಾರೆ.
ಚಿಹ್ನೆ ಹಂಚಿಕೆ:
ಚುನಾವಣಾವೀಕ್ಷಕ ನವೀನ್ ಎಸ್.ಎಲ್.,ಜಿಲ್ಲಾ ಚುನಾವಣಾ ಅಧಿಕಾರಿ ಡಾ.ಕೆ.ಹರೀಶಕುಮಾರ್,ಜಿಲ್ಲಾ ‘ಸ್ವೀಪ್’ ಸಮಿತಿ ಅಧ್ಯಕ್ಷ ಮೊಹಮ್ಮದ್ ರೋಶನ್, ಹೆಚ್ಚುವರಿ ಜಿಲ್ಲಾಧಿಕಾರಿ ನಾಗರಾಜ್ ಸಿಂಗ್ರೇರ್ ಅವರ ಉಪಸ್ಥಿತಿಯಲ್ಲಿ ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿಅಭ್ಯರ್ಥಿಗಳಿಗೆ ಚಿಹ್ನೆಹಂಚಿಕೆ ಸಂಬಂಧಸಭೆ ನಡೆಯಿತು.
ಈ ವೇಳೆ ಕಣದಲ್ಲಿರುವ ಅಭ್ಯರ್ಥಿಗಳು ಹಾಗೂಕೆಲವರ ಅನುಪಸ್ಥಿತಿಯಲ್ಲಿ ಅವರ ಪ್ರತಿನಿಧಿಗಳುಹಾಜರಿದ್ದರು. ಇದೇ ವೇಳೆ ಅಭ್ಯರ್ಥಿಗಳಿಗೆ ಚಿಹ್ನೆಯನ್ನೂ ಹಂಚಿಕೆ ಮಾಡಲಾಯಿತು.ಕ್ರಮಸಂಖ್ಯೆಗೆ ಅನುಗುಣವಾಗಿರಾಷ್ಟ್ರೀಯ ಪಕ್ಷದ (ಬಿಜೆಪಿ) ಅಭ್ಯರ್ಥಿಯಾದಅನಂತಕುಮಾರ್ ಹೆಗಡೆ ಮೊದಲ ಸ್ಥಾನದಲ್ಲಿದ್ದರೆ, ಪ್ರಾದೇಶಿಕ ಪಕ್ಷದ (ಜೆಡಿಎಸ್) ಆನಂದ ಅಸ್ನೋಟಿಕರ್ ಎರಡನೇ ಸ್ಥಾನದಲ್ಲಿ ಇದ್ದಾರೆ.
ಅ.ಸಂ; ಅಭ್ಯರ್ಥಿ; ಪಕ್ಷ; ಚಿಹ್ನೆ
1.;ಅನಂತಕುಮಾರ್ ಹೆಗಡೆ; ಬಿಜೆಪಿ; ಕಮಲ
2.;ಆನಂದ ಅಸ್ನೋಟಿಕರ್; ಜೆಡಿಎಸ್; ತೆನೆ ಹೊತ್ತ ರೈತ ಮಹಿಳೆ