ಪ್ರವಾಹದಿಂದಾಗಿ ಮನೆ, ಆಸ್ತಿಗಳನ್ನು ಕಳೆದುಕೊಂಡವರು ತಮ್ಮ ಜಾನುವಾರಿಗೆ ಮೇವು ಒದಗಿಸಲಾಗದೇ ಜನ ತೀವ್ರ ಸಂಕಷ್ಟದಲ್ಲಿದ್ದಾರೆ. ಹಾಗಾಗಿ ಹಲವು ಹೈನುಗಾರರು ಹಸು, ಕರುಗಳನ್ನು ಮಾರಾಟ ಮಾಡಲು ಸಿದ್ಧತೆ ಮಾಡಿಕೊಂಡಿದ್ದರು. ಇದಕ್ಕೆ ಸ್ಪಂದಿಸಿದ ರಾಮಚಂದ್ರಾಪುರ ಮಠವು ಗೋಪರಿವಾರದ ಮೂಲಕ ಮೇವು ಲಭ್ಯವಿರುವ ಸ್ಥಳಗಳಿಂದ ತರಿಸಿ ಉಚಿತವಾಗಿ ವಿತರಿಸಿದೆ.
ಗೋಕರ್ಣದ ಮಹಾಬಲೇಶ್ವರ ದೇವಸ್ಥಾನ, ಉದ್ಯಮಿ ಎನ್.ಎಚ್.ಇಲ್ಲೂರು, ಕುಷ್ಟಗಿ ಬಂಗಾರಶೆಟ್ಟಿ, ಗೋಕರ್ಣದ ಉಪಾಧಿವಂತ ಮಂಡಳಿ, ಸಹರಾ ಫೌಂಡೇಷನ್, ಮಂಜುನಾಥ್ ಪಾಟೀಲ ಹುಲ್ಲು ಖರೀದಿ ಹಾಗೂ ವಿತರಣೆಗೆ ನೆರವಾದರು.ವಿ.ಡಿ.ಭಟ್ ನೇತೃತ್ವದಲ್ಲಿ ರಮೇಶ ನಾಯಕ ಹಿಲ್ಲೂರು, ತ್ರಯಂಬಕ ಬಾಂದೇಕರ್, ರಾಮಾನಂದ ನಾಯಕ, ನಂದು ಗಾಂವ್ಕರ್, ವಿನಾಯಕ ನಾಯಕ, ಶಾಂತ ನಾಯಕ, ಗಣಪತಿ ಭಟ್ಹಳ್ಳಿಹಳ್ಳಿಗಳಿಗೆ ತೆರಳಿ ಮೇವು ವಿತರಿಸಿದರು.