‘ಶ್ರೀಶೈಲ 2020ರ ಆ.18 ರಂದು ಶ್ರೀರಾಮ ಪ್ರೌಢಶಾಲೆಗೆ ನೇಮಕಾತಿ ಆಗಿದ್ದರು. ಸೆ.2ರ ವರೆಗೆ ಮಾತ್ರ ಕೆಲಸ ಮಾಡಿದ್ದ ಅವರು ಬಳಿಕ ಅಕ್ಟೋಬರ್ 2ರ ವರೆಗೆ ವೈದ್ಯಕೀಯ ರಜೆ ಪಡೆದಿದ್ದರು. ನಂತರ ಅನುಮತಿ ಪಡೆಯದೆ ರಜೆ ಮೇಲಿದ್ದಾರೆ. ಈವರೆಗೂ ಕೆಲಸಕ್ಕೆ ಹಾಜರಾಗಿಲ್ಲ. ಹೀಗಾಗಿ ನೊಟೀಸ್ ನೀಡಲಾಗಿದೆ’ ಎಂದು ಡಿಡಿಪಿಐ ದಿವಾಕರ ಶೆಟ್ಟಿ ತಿಳಿಸಿದ್ದಾರೆ.