ಈ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ತೋಟದ ಮಾಲೀಕಗೋವಿಂದ ವಿ.ಹೆಗಡೆ, ‘ಈಗಾಗಲೇ ಸುಮಾರು 15 ಅಡಿಕೆ ಸಸಿಗಳ ಬುಡ ಕೊಳೆತಿದೆ. ಹತ್ತಾರು ವರ್ಷಗಳ ಹಿಂದಿನ ಗಿಡಗಳಿಗೆ ತೊಂದರೆಯಾಗಿಲ್ಲ. ಸಿಂಗಾರಗಳು ಅರಳಿದ್ದ ಎರಡು ಮೂರು ವರ್ಷ ಪ್ರಾಯದ ಸಸಿಗಳಬುಡದಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಸಸಿಗಳಿಗೆ ಗೊಬ್ಬರ ನೀಡಲೆಂದು ಅವುಗಳ ಬುಡದ ಕಳೆ ಮತ್ತು ಮಣ್ಣನ್ನು ಬಿಡಿಸಿದಾಗ ಈ ವಿಚಾರ ಗೊತ್ತಾಯಿತು’ ಎಂದು ವಿವರಿಸಿದರು.