‘ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಗಳಾದ ಉದ್ಯಮಿ ಸುರೇಶ ರಾಮಚಂದ್ರ ನಾಯಕ, ಬೊಮ್ಮಯ್ಯ ಸಣ್ಣಪ್ಪ ನಾಯಕ ಮತ್ತು ಸುರೇಶ ಗಿರಿಯಣ್ಣ ನಾಯಕ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಪ್ರಕರಣದ ಮತ್ತೊಬ್ಬ ಆರೋಪಿ, ಬಾಲಕನನ್ನು ಕಾರವಾರದ ಬಾಲನ್ಯಾಯ ಮಂಡಳಿಯಲ್ಲಿ ಇರಿಸಲಾಗಿದೆ. ಮತ್ತೊಬ್ಬ ಆರೋಪಿ ಗೋಪಾಲ ಗಿರಿಯಣ್ಣ ನಾಯಕ ನಾಪತ್ತೆಯಾಗಿದ್ದು, ತೀವ್ರ ಹುಡುಕಾಟ ನಡೆಸಿದ್ದೇವೆ’ ಎಂದು ಸಿ.ಪಿ.ಐ ಕೃಷ್ಣಾನಂದ ನಾಯಕ ಮಾಹಿತಿ ನೀಡಿದರು.