<p><strong>ಯಲ್ಲಾಪುರ:</strong> ಕಾವ್ಯ ರಚನೆ ಅದೊಂದು ತಪಸ್ಸು, ಕವಿಯ ಕಲ್ಪನೆ, ಚಿಂತನೆ ಸಮಾಜಕ್ಕೆ ದಾರಿ ದೀಪವಾಗಬೇಕು. ಆ ದೃಷ್ಟಿಯಲ್ಲಿ ಹಿಟ್ಟಿನ ಬೈಲ್ ಶಿವರಾಮ ಭಟ್ಟರ ಹನಿಗವನಗಳು ಅಂತಶಕ್ತಿಯನ್ನು ಹೊಂದಿದೆ. ಜೀವನದ ಸನ್ನಿವೇಶಗಳನ್ನ ಕವನದ ರೂಪದಲ್ಲಿ ಮುಂದಿನ ತಲೆಮಾರಿಗೆ ನೀಡಿದ್ದಾರೆ ಎಂದು ಶಿಕ್ಷಕ, ಚಿತ್ರಕಲಾವಿದ ಸತೀಶ ಯಲ್ಲಾಪುರ ಹೇಳಿದರು.</p>.<p>ಪಟ್ಟಣದ ಶ್ರೀ ಶಕ್ತಿ ಗಣಪತಿ ಆವರಣದಲ್ಲಿ ಶನಿವಾರ ಶ್ರೀ ಶಾರದಾಂಬಾ ಸಂಗೀತ ಸಂಸ್ಥೆ ಆಶ್ರಯದಲ್ಲಿ ಹಿರಿಯ ಕವಿ ಶಿವರಾಮ ಭಟ್ಟ ಹಿಟ್ಟಿನಬೈಲ್ ಅವರ`ಹನಿಧಾರೆ' ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡಿದರು.</p>.<p>ಸಂಕಲ್ಪ ಸೇವಾ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಶಿವರಾಮ ಭಟ್ಟರ ಕೃತಿಯಲ್ಲಿ ಸೊಗಸಿನ ಹನಿಗವನಗಳು ಮೂಡಿಬಂದಿದೆ. ನಾವು ಮತ್ತು ನಮ್ಮ ಮಕ್ಕಳು ಅನೇಕ ಕನಸುಗಳನ್ನು ಕಾಣುತ್ತೇವೆ. ಆ ಕನಸುಗಳು ಸ್ವಾತಿ ಮುತ್ತುಗಳಾಗಬೇಕೆ ವಿನಹ ಕಾದ ಬಂಡಿಯ ಮೇಲೆ, ಕಮಲದ ಎಲೆಯ ಮೇಲೆ ಬಿದ್ದು ಹೋಗುವಂತದ್ದಾಗಿರಬಾರದು ಎಂದರು.</p>.<p>ಟಿಎಂಎಸ್ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿ ಕುಂಬ್ರಿ ಅಧ್ಯಕ್ಷತೆ ವಹಿಸಿದ್ದರು. ಮಲೆನಾಡು ಕೃಷಿ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ, ಹಿಂದೂಸ್ತಾನಿ ಗಾಯಕಿ ವಾಣಿ ರಮೇಶ ಹೆಗಡೆ, ಸುಮನಾ ಗಣೇಶ ಭಟ್ಟ ಕೋಪ್ಪಲ ತೋಟ ಮಾತನಾಡಿದರು.</p>.<p>ಕವಿ ಶಿವರಾಮ ಭಟ್ಟರ ಮಡದಿ ನಾಗವೇಣಿ ಭಟ್ಟ, ಲಕ್ಷ್ಮಿ ರಾಮಕೃಷ್ಣ ಭಟ್ಟ ಬೀದರೆಪಾಲ್ ಉಪಸ್ಥಿತರಿದ್ದರು. ದತ್ತಾತ್ರೆಯ ಹೆಗಡೆ ಹೆಡದ್ಬೈಲ್, ಗುರುಪ್ರಸಾದ ಹೆಗಡೆ ಪ್ರಾಸ್ತಾವಿಕ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಲ್ಲಾಪುರ:</strong> ಕಾವ್ಯ ರಚನೆ ಅದೊಂದು ತಪಸ್ಸು, ಕವಿಯ ಕಲ್ಪನೆ, ಚಿಂತನೆ ಸಮಾಜಕ್ಕೆ ದಾರಿ ದೀಪವಾಗಬೇಕು. ಆ ದೃಷ್ಟಿಯಲ್ಲಿ ಹಿಟ್ಟಿನ ಬೈಲ್ ಶಿವರಾಮ ಭಟ್ಟರ ಹನಿಗವನಗಳು ಅಂತಶಕ್ತಿಯನ್ನು ಹೊಂದಿದೆ. ಜೀವನದ ಸನ್ನಿವೇಶಗಳನ್ನ ಕವನದ ರೂಪದಲ್ಲಿ ಮುಂದಿನ ತಲೆಮಾರಿಗೆ ನೀಡಿದ್ದಾರೆ ಎಂದು ಶಿಕ್ಷಕ, ಚಿತ್ರಕಲಾವಿದ ಸತೀಶ ಯಲ್ಲಾಪುರ ಹೇಳಿದರು.</p>.<p>ಪಟ್ಟಣದ ಶ್ರೀ ಶಕ್ತಿ ಗಣಪತಿ ಆವರಣದಲ್ಲಿ ಶನಿವಾರ ಶ್ರೀ ಶಾರದಾಂಬಾ ಸಂಗೀತ ಸಂಸ್ಥೆ ಆಶ್ರಯದಲ್ಲಿ ಹಿರಿಯ ಕವಿ ಶಿವರಾಮ ಭಟ್ಟ ಹಿಟ್ಟಿನಬೈಲ್ ಅವರ`ಹನಿಧಾರೆ' ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡಿದರು.</p>.<p>ಸಂಕಲ್ಪ ಸೇವಾ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಶಿವರಾಮ ಭಟ್ಟರ ಕೃತಿಯಲ್ಲಿ ಸೊಗಸಿನ ಹನಿಗವನಗಳು ಮೂಡಿಬಂದಿದೆ. ನಾವು ಮತ್ತು ನಮ್ಮ ಮಕ್ಕಳು ಅನೇಕ ಕನಸುಗಳನ್ನು ಕಾಣುತ್ತೇವೆ. ಆ ಕನಸುಗಳು ಸ್ವಾತಿ ಮುತ್ತುಗಳಾಗಬೇಕೆ ವಿನಹ ಕಾದ ಬಂಡಿಯ ಮೇಲೆ, ಕಮಲದ ಎಲೆಯ ಮೇಲೆ ಬಿದ್ದು ಹೋಗುವಂತದ್ದಾಗಿರಬಾರದು ಎಂದರು.</p>.<p>ಟಿಎಂಎಸ್ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿ ಕುಂಬ್ರಿ ಅಧ್ಯಕ್ಷತೆ ವಹಿಸಿದ್ದರು. ಮಲೆನಾಡು ಕೃಷಿ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ, ಹಿಂದೂಸ್ತಾನಿ ಗಾಯಕಿ ವಾಣಿ ರಮೇಶ ಹೆಗಡೆ, ಸುಮನಾ ಗಣೇಶ ಭಟ್ಟ ಕೋಪ್ಪಲ ತೋಟ ಮಾತನಾಡಿದರು.</p>.<p>ಕವಿ ಶಿವರಾಮ ಭಟ್ಟರ ಮಡದಿ ನಾಗವೇಣಿ ಭಟ್ಟ, ಲಕ್ಷ್ಮಿ ರಾಮಕೃಷ್ಣ ಭಟ್ಟ ಬೀದರೆಪಾಲ್ ಉಪಸ್ಥಿತರಿದ್ದರು. ದತ್ತಾತ್ರೆಯ ಹೆಗಡೆ ಹೆಡದ್ಬೈಲ್, ಗುರುಪ್ರಸಾದ ಹೆಗಡೆ ಪ್ರಾಸ್ತಾವಿಕ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>