ಯಲ್ಲಾಪುರ: ಕಾವ್ಯ ರಚನೆ ಅದೊಂದು ತಪಸ್ಸು, ಕವಿಯ ಕಲ್ಪನೆ, ಚಿಂತನೆ ಸಮಾಜಕ್ಕೆ ದಾರಿ ದೀಪವಾಗಬೇಕು. ಆ ದೃಷ್ಟಿಯಲ್ಲಿ ಹಿಟ್ಟಿನ ಬೈಲ್ ಶಿವರಾಮ ಭಟ್ಟರ ಹನಿಗವನಗಳು ಅಂತಶಕ್ತಿಯನ್ನು ಹೊಂದಿದೆ. ಜೀವನದ ಸನ್ನಿವೇಶಗಳನ್ನ ಕವನದ ರೂಪದಲ್ಲಿ ಮುಂದಿನ ತಲೆಮಾರಿಗೆ ನೀಡಿದ್ದಾರೆ ಎಂದು ಶಿಕ್ಷಕ, ಚಿತ್ರಕಲಾವಿದ ಸತೀಶ ಯಲ್ಲಾಪುರ ಹೇಳಿದರು.