ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿಬ್ಬಕ್ಕೆ ಡಿಕ್ಕಿ ಹೊಡೆದ ಬಸ್: 15ಕ್ಕೂ ಅಧಿಕ ಪ್ರಯಾಣಿಕರಿಗೆ ಗಾಯ

Last Updated 5 ಏಪ್ರಿಲ್ 2021, 6:07 IST
ಅಕ್ಷರ ಗಾತ್ರ

ಯಲ್ಲಾಪುರ: ಕಳಚೆ-ಯಲ್ಲಾಪುರ ನಡುವಿನ ಬಸ್ ಚಾಲಕನ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿ 63ರ ಆರ್ತಿಬೈಲ್ ಘಟ್ಟದ ಬಳಿ ದಿಬ್ಬಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ 15 ಕ್ಕೂ ಹೆಚ್ಚು ಜನ ಪ್ರಯಾಣಿಕರು ಗಾಯಗೊಂಡಿದ್ದಾರೆ.

ಬಹುತೇಕರು ಕಾಲೇಜು ವಿದ್ಯಾರ್ಥಿಗಳಾಗಿದ್ದುಪರೀಕ್ಷೆ ನಡೆಯುವುದರಿಂದ ತುಸು ಮೊದಲೇ ಕಾಲೇಜಿಗೆ ಬರುತ್ತಿದ್ದರು.

ಸ್ವಾತಿ ಸಂತೋಷ ನಾಯ್ಕ (18) ತೆಲಂಗಾರ, ರಂಜನಾ ಜಿ.ಕುಣಬಿ (16) ವಜ್ರಳ್ಳಿ, ಚೈತ್ರಾ ಚಂದ್ರು ಪೂಜಾರ (18) ಹೊನ್ನಗದ್ದೆ, ಸಂದ್ಯಾ ಎಸ್ ಅಂಬೀಗ(18) ಹೊನ್ನಗದ್ದೆ, ರಜನಿ ಮರಾಠೆ (18), ಸ್ವಾತಿ ಗಾಂವ್ಕರ(16) ತೆಲಂಗಾರ, ಅರ್ಪಿತಾ ಭಟ್ಟ (18) ಹೊನಗದ್ದೆ, ಶಿಲ್ಪಾ ಕಳಸ (18), ಚೈತನ್ಯ ಪೂಜಾರಿ(18) ಹೊನ್ನಗದ್ದೆ, ಸುನಿತಾ ಕಳಸ(17) ಕಳಚೆ, ಪರಮೇಶ್ವರ ಎನ್.ಭಟ್ (65) ಕಳಚೆ, ಸೀತಾರಾಮ ಗೌಡ(42) ಕಳಚೆ ಗಾಯಗೊಂಡವರು.

ಇವರೆಲ್ಲರೂ ಕಳಚೆಯಿಂದ ಯಲ್ಲಾಪುರಕ್ಕೆ ಬರುತ್ತಿದ್ದ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಗಾಯಗೊಂಡ ವಿದ್ಯಾರ್ಥಿಗಳು ಸರ್ಕಾರಿ ಪಿಯು ಕಾಲೇಜ್, ವೈಟಿಎಸ್ಎಸ್ ಪಿಯು ಕಾಲೇಜು, ಮದರ್ ತೆರೇಸಾ ಆಂಗ್ಲಮಾಧ್ಯಮ ಶಾಲೆ, ವಿಶ್ವದರ್ಶನ ಪ್ರೌಢಶಾಲೆಗೆ ತೆರಳುತ್ತಿದ್ದರು. ಘಟನಾ ಸ್ಥಳಕ್ಕೆ ಹಾಗೂ ಆಸ್ಪತ್ರೆಗೆ ಪೊಲೀಸರು ಧಾವಿಸಿದ್ದು ತನಿಖೆ ನಡೆಸಿದ್ದಾರೆ.

ಸ್ಥಳಕ್ಕೆ ಸಚಿವ ಶಿವರಾಮ ಹೆಬ್ಬಾರ್ ತೆರಳಿ ಗಾಯಾಳುಗಳಿಗೆ ಸಾಂತ್ವನ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT