ಕಡಲ್ಕೊರೆತದಿಂದ ಭೂಪ್ರದೇಶ ಸಮುದ್ರ ಪಾಲಾಗುತ್ತಿದೆ. ಈ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಶಾಸಕಿ ರೂಪಾಲಿ ನಾಯ್ಕ, ಆ.3ರಂದು ಮುಖ್ಯಮಂತ್ರಿಗೆ ಬೆಂಗಳೂರಿನಲ್ಲಿ ನೀಡಿದ ಮನವಿಯಲ್ಲಿ ತಿಳಿಸಿದ್ದರು. ಸುಮಾರು 120 ಮೀಟರ್ ಉದ್ದದ ಹಳೆಯ ತಡೆಗೋಡೆಯ ದುರಸ್ತಿ ಮತ್ತು ಮರು ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡುವಂತೆಯೂ ಕೋರಿದ್ದರು.