ಕಾಂಗ್ರೆಸ್ ಜಿಲ್ಲಾ ಘಟಕದ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಿವೃತ್ತ ಯೋಧರಾದ ವಿನಾಯಕ ಭಟ್ಟ, ರಾಮಚಂದ್ರ ನಾಯ್ಕ ಮಸ್ತಾನೆ, ಮಂಜುನಾಥ ಪಟಗಾರ, ರಾಮ ಲೋಕರೆ, ಜಯವಂತ ನಾಯ್ಕ ಕಾನಗೋಡ, ಭೀಮಪ್ಪ ಗುಂಜೇಕರ್, ಗಣಪತಿ ರಾನೆ ಅವರನ್ನು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ, ಕಿಸಾನ್ ಸೆಲ್ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಹೆಗಡೆ ಸನ್ಮಾನಿಸಿದರು.