<p><strong>ಶಿರಸಿ:</strong> ಮಳೆಯಿಂದಾಗಿ ಇಲ್ಲಿನ ವಾರ್ಡ್ ನಂ.25ರ ಹಲವೆಡೆ ರಸ್ತೆಗೆ ಬಿದ್ದಿದ್ದ ಹೊಂಡಗಳನ್ನು ವಾರ್ಡ್ ಸದಸ್ಯ ನಾಗರಾಜ ನಾಯ್ಕ ಅವರೇ ಮುಚ್ಚಿದ್ದಾರೆ.</p>.<p>ವಾರ್ಡ್ ವ್ಯಾಪ್ತಿಯ ಗಾಂಧಿ ನಗರ, ರಾಯರಪೇಟೆ ಭಾಗದಲ್ಲಿ ಸತತ ಮಳೆಗೆ ರಸ್ತೆಗಳು ಹಾಳಾಗಿವೆ. ಬೃಹತ್ ಗಾತ್ರದ ಹೊಂಡಗಳಿಂದ ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತಿದೆ. ಇದನ್ನು ಅರಿತ ಸದಸ್ಯ ನಾಗರಾಜ ತಾತ್ಕಾಲಿಕ ದುರಸ್ತಿ ಕಾರ್ಯವನ್ನು ಕೈಗೊಂಡರು. ಜಲ್ಲಿ, ಮಣ್ಣು, ಸಿಮೆಂಟ್ ಬಳಸಿ ಹೊಂಡಗಳನ್ನು ಭರ್ತಿ ಮಾಡಿದರು.</p>.<p>ಕೆಲವು ದಿನಗಳ ಹಿಂದೆ ಸುರಿದಿದ್ದ ಭಾರಿ ಮಳೆಗೆ ಇದೇ ವಾರ್ಡ್ ವ್ಯಾಪ್ತಿಯ ಹಾಲೊಂಡ ಬಡಾವಣೆಯಲ್ಲಿ ಧರೆ ಕುಸಿತ ಉಂಟಾಗುವ ಹಂತದಲ್ಲಿದ್ದಾಗ ಅದನ್ನು ತಡೆಯಲು ಚರಂಡಿ ನಿರ್ಮಿಸುವ ವೇಳೆ ಸ್ವತಃ ಕಾರ್ಯಾಚರಣೆಗೆ ಇಳಿದಿದ್ದರು.</p>.<p>‘ಜನರ ದೂರಿಗೆ ಸ್ಪಂದಿಸಿದ ಸಂತೃಪ್ತಿ ಇದೆ. ಮಳೆ ಇಳಿಮುಖವಾದ ನಂತರ ರಸ್ತೆಗಳನ್ನು ಸರಿಪಡಿಸಲು ನಗರಸಭೆಯಿಂದ ಕ್ರಮವಹಿಸಲಾಗುವುದು. ಸಣ್ಣಪುಟ್ಟ ಕೆಲಸಕ್ಕೂ ಅಧಿಕಾರಿಗಳಿಗೆ ತಿಳಿಸುವ ಬದಲು ಕೈಲಾದಷ್ಟು ಮಟ್ಟಿಗೆ ಕೆಲಸ ಮಾಡಿದ್ದೇನೆ’ ಎಂದು ನಾಗರಾಜ ನಾಯ್ಕ ಪ್ರತಿಕ್ರಿಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಸಿ:</strong> ಮಳೆಯಿಂದಾಗಿ ಇಲ್ಲಿನ ವಾರ್ಡ್ ನಂ.25ರ ಹಲವೆಡೆ ರಸ್ತೆಗೆ ಬಿದ್ದಿದ್ದ ಹೊಂಡಗಳನ್ನು ವಾರ್ಡ್ ಸದಸ್ಯ ನಾಗರಾಜ ನಾಯ್ಕ ಅವರೇ ಮುಚ್ಚಿದ್ದಾರೆ.</p>.<p>ವಾರ್ಡ್ ವ್ಯಾಪ್ತಿಯ ಗಾಂಧಿ ನಗರ, ರಾಯರಪೇಟೆ ಭಾಗದಲ್ಲಿ ಸತತ ಮಳೆಗೆ ರಸ್ತೆಗಳು ಹಾಳಾಗಿವೆ. ಬೃಹತ್ ಗಾತ್ರದ ಹೊಂಡಗಳಿಂದ ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತಿದೆ. ಇದನ್ನು ಅರಿತ ಸದಸ್ಯ ನಾಗರಾಜ ತಾತ್ಕಾಲಿಕ ದುರಸ್ತಿ ಕಾರ್ಯವನ್ನು ಕೈಗೊಂಡರು. ಜಲ್ಲಿ, ಮಣ್ಣು, ಸಿಮೆಂಟ್ ಬಳಸಿ ಹೊಂಡಗಳನ್ನು ಭರ್ತಿ ಮಾಡಿದರು.</p>.<p>ಕೆಲವು ದಿನಗಳ ಹಿಂದೆ ಸುರಿದಿದ್ದ ಭಾರಿ ಮಳೆಗೆ ಇದೇ ವಾರ್ಡ್ ವ್ಯಾಪ್ತಿಯ ಹಾಲೊಂಡ ಬಡಾವಣೆಯಲ್ಲಿ ಧರೆ ಕುಸಿತ ಉಂಟಾಗುವ ಹಂತದಲ್ಲಿದ್ದಾಗ ಅದನ್ನು ತಡೆಯಲು ಚರಂಡಿ ನಿರ್ಮಿಸುವ ವೇಳೆ ಸ್ವತಃ ಕಾರ್ಯಾಚರಣೆಗೆ ಇಳಿದಿದ್ದರು.</p>.<p>‘ಜನರ ದೂರಿಗೆ ಸ್ಪಂದಿಸಿದ ಸಂತೃಪ್ತಿ ಇದೆ. ಮಳೆ ಇಳಿಮುಖವಾದ ನಂತರ ರಸ್ತೆಗಳನ್ನು ಸರಿಪಡಿಸಲು ನಗರಸಭೆಯಿಂದ ಕ್ರಮವಹಿಸಲಾಗುವುದು. ಸಣ್ಣಪುಟ್ಟ ಕೆಲಸಕ್ಕೂ ಅಧಿಕಾರಿಗಳಿಗೆ ತಿಳಿಸುವ ಬದಲು ಕೈಲಾದಷ್ಟು ಮಟ್ಟಿಗೆ ಕೆಲಸ ಮಾಡಿದ್ದೇನೆ’ ಎಂದು ನಾಗರಾಜ ನಾಯ್ಕ ಪ್ರತಿಕ್ರಿಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>