ಮೂರು ದಿನಗಳ ಹಿಂದೆ ಬಲೀಂದ್ರನನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲಿಸಿದ ರೈತರು, ಬಲಿಪಾಡ್ಯದ ದಿನವಾದ ಮಂಗಳವಾರ ಗೋವುಗಳನ್ನು ಸಿಂಗರಿಸಿದರು. ರೊಟ್ಟಿ, ಪಚ್ಚೆತೆನೆ ಎಲೆಗಳಿಂದ ಮಾಡಿದ ದಂಡೆಗಳನ್ನು ಕಟ್ಟಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಹೋರಿಗಳನ್ನು ಬಣ್ಣದ ಕಾಗದದ ಹೂವುಗಳಿಂದ ಸಿಂಗರಿಸಿ ಬೆದರಿಸುವ ಆಚರಣೆ ಹಮ್ಮಿಕೊಂಡರು. ಈ ವೇಳೆ ಹೋರಿಗಳ ಓಟ, ಹಾರಾಟ, ರೈತರ ಸಂಭ್ರಮ ನೋಡುಗರ ಗಮನ ಸೆಳೆಯಿತು.