ಆಗಸ್ಟ್ ತಿಂಗಳಲ್ಲಿ ಸುರಿದ ಮಳೆಗೆ ಜಿಲ್ಲೆಯಲ್ಲಿ ಕೃಷಿ ಬೆಳೆಗೆ ಸಾಕಷ್ಟು ಹಾನಿಯಾಗಿದೆ. ಆ ಸಂದರ್ಭದಲ್ಲಿ ಕೃಷಿ ಇಲಾಖೆ ನಡೆಸಿದ ಪ್ರಾಥಮಿಕ ಮಾಹಿತಿ ಪ್ರಕಾರ ಕಾರವಾರದಲ್ಲಿ 425 ಹೆಕ್ಟೇರ್, ಅಂಕೋಲಾದಲ್ಲಿ 1260 ಹೆಕ್ಟೇರ್, ಕುಮಟಾದಲ್ಲಿ 1300 ಹೆಕ್ಟೇರ್, ಹೊನ್ನಾವರ 310 ಹೆಕ್ಟೇರ್, ಭಟ್ಕಳ 30 ಹೆಕ್ಟೇರ್, ಶಿರಸಿ 1435 ಹೆಕ್ಟೇರ್, ಯಲ್ಲಾಪುರ 219 ಹೆಕ್ಟೇರ್, ಮುಂಡಗೋಡ 2095 ಹೆಕ್ಟೇರ್, ಸಿದ್ದಾಪುರ 648 ಹೆಕ್ಟೇರ್, ಹಳಿಯಾಳ 1690 ಹೆಕ್ಟೇರ್, ಜೊಯಿಡಾದಲ್ಲಿ 523 ಹೆಕ್ಟೇರ್ ಹಾನಿ ಸಂಭವಿಸಿತ್ತು. ಒಟ್ಟು 504 ಗ್ರಾಮಗಳಲ್ಲಿ ₹ 56.07 ಕೋಟಿ ನಷ್ಟವಾಗಿರಬಹುದೆಂದು ಅಂದಾಜಿಸಲಾಗಿತ್ತು.