ಮುಂದಿನ ಆದೇಶದವರೆಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ, ಪುನಸ್ಕಾರ ಹಾಗೂ ಸೇವೆಗಳಿಗೆ ಅವಕಾಶವಿಲ್ಲ. ನಿತ್ಯ ಮಧ್ಯಾಹ್ನದ ಪ್ರಸಾದ ಭೋಜನ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಏ.8ರ ಬ್ರಹ್ಮರಥೋತ್ಸವ ವೇಳೆಗೆ ಹರಕೆ ರೂಪದಲ್ಲಿ ಭಕ್ತರು ಸಲ್ಲಿಸುತ್ತಿದ್ದ ಸೇವೆಗಳಾದ ಮಹಾರಥಕ್ಕೆ ಸಲ್ಲಿಸುವ ಕಾಯಿ, ಕಬ್ಬು, ಅಡಿಕೆ ಕೊನೆಗಳು, ತರಕಾರಿ ಹಾಗೂ ನಾರಾಯಣ ಭೂತರಾಜನಿಗೆ ನೀಡುತ್ತಿದ್ದ ಕಾಯಿ, ರಥಾರೂಢ ವೆಂಕಟರಮಣ ದೇವರ ಪಾದದಡಿಯಲ್ಲಿ ಶಿಶುಗಳನ್ನು ಮಲಗಿಸುವ, ದೇವಸ್ಥಾನಕ್ಕೆ ಸಮರ್ಪಿಸುವ ರಥಗಾಣಿಕೆ ಹಾಗೂ ಇನ್ನಿತರ ಸೇವೆಗಳಿಗೆ ಕೆಲ ದಿನಗಳ ನಂತರ ಅವಕಾಶ ಮಾಡಿಕೊಡಲಾಗುತ್ತದೆ ಎಂದು ದೇವಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.