‘ಪ್ರತಿವರ್ಷ ಅರಣ್ಯ ಕಾಲೇಜು ಹಾಗೂ ತೋಟಗಾರಿಕಾ ಕಾಲೇಜಿನ ವಿದ್ಯಾರ್ಥಿಗಳು, ತಮ್ಮ ಕಲಿಕೆಯ ಭಾಗವಾಗಿ ಮುರುಗಲು ಹಣ್ಣನ್ನು ಖರೀದಿಸಿ, ಅವುಗಳಿಂದ ಕೋಕಂ ಜ್ಯೂಸ್ ಸಿದ್ಧಪಡಿಸಿ ಮಾರಾಟ ಮಾಡುತ್ತಿದ್ದರು. ಈ ಬಾರಿ ಲಾಕ್ಡೌನ್ ಇರುವ ಕಾರಣ ಹಣ್ಣಿಗೆ ಬೇಡಿಕೆ ಬರಲಿಲ್ಲ. ಹೀಗಾಗಿ, ಔಷಧೀಯ ಮೌಲ್ಯವಿರುವ ಹಣ್ಣು ಹಾಗೂ ಬೀಜವನ್ನು ಪ್ರತ್ಯೇಕಿಸಿ, ಬಿಸಿಲಿನಲ್ಲಿ ಒಣಗಿಸಿಡುತ್ತಿದ್ದೇನೆ. ಬುಟ್ಟಿಗಟ್ಟಲೆ ಹಣ್ಣು ಕೊಯ್ಲು ಮಾಡಿ ತಂದರೆ, ಹೆಂಡತಿ, ಇಬ್ಬರು ಮಕ್ಕಳು ಅವುಗಳ ಸಂಸ್ಕರಣೆ ಮಾಡುತ್ತಾರೆ’ ಎನ್ನುತ್ತಾರೆ ರಮೇಶ ಹೆಗಡೆ.